Posts

ʻʻಪರಿಸ್ಥಿತಿ ಮತ್ತು ಪರ್ಯಾಯ ಸೃಷ್ಟಿ.ʼʼ

                ಹಳಿಯ ಬೇಡಿ   ಹಳ್ಳಿಯ   ಹಿಡಿಯ ಬೇಡಿ   ಕೊಳ್ಳಿ                     ಹಿರಿಯ ಬೇಡಿ ಬಳ್ಳಿಯ     ಕೊಲ್ಲಬೇಡಿ   ಹುಲ್ಲೆಯ |                       ಭೂಮಿ ಬಾನು   ಬಂಧದಲ್ಲಿ     ಅರಳಿ ಹೊಳೆವ   ಚೇತನ                       ನೆಳಲು ಬೆಳಕು   ಚೆಲ್ಲಿದ   ರಂಗವಲ್ಲಿ   ಈ   ಜೀವನ ||                     ʻʻ   ಸಹಕಾರ ʼʼ ಎಂಬ ಸಂಜೀವಿನಿಯ   ಪ್ರವಾಹ ನಮ್ಮ ಜಿಲ್ಲೆಯಲ್ಲಿ ಉದ್ಭವಿಸದೇ   ಇದ್ದಿದ್ದಲ್ಲಿ   ಇಲ್ಲಿಯ ರೈತಾಪಿ ಬದುಕು ಹೇಗಿರುತ್ತಿತ್ತು   ಎಂಬ ಪ್ರಶ್ನೆಯನ್ನು ನಮ್ಮೊಳಗೇ ಪ್ರಶ್ನಿಸಿಕೊಂಡಲ್ಲಿ   ಬಹುಷಃ...

ಬದುಕೆಂದರೆ......

  ಬದುಕುವವರೆಲ್ಲ್ರರಿಗೂ   ಬದುಕಿನ ಬಗೆಗೆ   ಮಾತನಾಡುವ   ಹಕ್ಕಿದೆ. ಬದುಕಲು ಇಚ್ಛಿಸುವ ಎಲ್ಲರಿಗೂ   ಬದುಕು ದಕ್ಕಿದೆ...? ಛೇ...ಛೇ.. ಸುಳ್ಳು ಸುಳ್ಳು. ದಕ್ಕದೆಯೂ   ಬದುಕಿದ್ದಾರೆ ಅಷ್ಟೇ. ಬದುಕೆಂದರೇನೆಂದು ಹುಡುಕ ಹೊರಟವರೆಲ್ಲ ಎದುರಾದ ಅಸಂಖ್ಯ ದಾರಿಗಳಲ್ಲಿ ದಿಕ್ಕು ತಪ್ಪಿ, ತಡಕಾಡಿದ್ದಾರೆ. ತಪ್ಪು ದಿಕ್ಕಿಗೆ ಢಿಕ್ಕಿ ಹೊಡೆದಿದ್ದಾರೆ. ಅರ್ಥವಾಗದಿದ್ದರೂ   ಅರ್ಥಕ್ಕಾಗಿ   ಬದುಕಿದ್ದಾರೆ. ಕತ್ತಲೆ ಬತ್ತಲೆ ಸುತ್ತಲೂ,   ಹೊತ್ತು ಕಳೆದಂತೆ ಉರುಳು, ಕತ್ತ ಸುತ್ತಲೂ. ಅಲ್ಲಿ ಹಗಲಿಲ್ಲ, ಇರುಳಿಲ್ಲ   ಬೆಳಕಿಲ್ಲ   ಹೊಳೆವ ಸೆಳಕಿಲ್ಲ ಬಂದ ದಾರಿಯ ನೆನಪಿಲ್ಲ, ಸಾಗುವ ದಾರಿಗೆ ಫಲಕವಿಲ್ಲ. ಯಾಕೆ ಸುಮ್ಮನೇ   ಇಂಥ ಭಂಡ ಸಾಹಸ...? ಅನ್ವೇಷಣೆಯ ನಿರರ್ಥಕ ಆಯಾಸ. ಬದುಕು ಅಂದರೆ ಹೀಗೆ ಎಂದು   ಬೊಗಳೆ ಬಿಡಲೇ ? ನಂಬುವ ಮಿದುಳಲ್ಲಿ ಸುಳ್ಳ   ಬಿತ್ತಿ ಬಿಡಲೇ..? ಯಾಕೆ ಬೇಕು,? ಇದೆಯಲ್ಲ.. ಈಗಲೇ ಸಾಕಷ್ಟು ತಿಂದು ಮಿಗುವಷ್ಟು ನೂರಾರು ಜನ್ಮಕ್ಕೆ ಸಾಕಾಗುವಷ್ಟು. ಅಷ್ಟಕ್ಕೂ ಇದಕ್ಕೇಕೆ ಉತ್ತರಿಸಬೇಕು..?   ನನ್ನ ಹೆಜ್ಜೆಗುರುತೇ ಹೇಳಬಹುದಲ್ಲ ನೀನೆಷ್ಟರವನೆಂದು. ಬದುಕು ಮಾತಿನಲ್ಲಿಲ್ಲ. ಅಹಮಿಕೆಯ ಆಟದಲ್ಲಿಲ್ಲ. ಉತ್ತರಿಸುವ ಒಣ ಜಂಬದಲ್ಲೂ   ಇಲ್ಲ.   .ಗದ್ದಲದ ಗೂಡಲ್ಲಿ   ಬದುಕು ಹಾಡುವ...

`` ಸತ್ವಪೂರ್ಣ ಸಾಧಕ- ಸಿಂಧೊಳ್ಳಿ ಸನದಿ.

            ಕವಿತೆ   ಮಾನವ ಸೃಷ್ಟಿಸಿಕೊಂಡ ಒಂದು ವಿಶಿಷ್ಟ ಜಗತ್ತು .   ಅನನ್ಯ ಅನುಭವಗಳ ರಸಲೋಕ . ಮಾನವ ಮನಸ್ಸು ಮತ್ತು ಬದುಕು ಕಂಡ ಉಂಡ ಸೂಕ್ಷ ö ್ಮ ಅನುಭವಗಳೆಲ್ಲ , ವಿಶಿಷ್ಟ ಅರ್ಥವಂತಿಕೆಯಿಂದ ಆಕರ್ಷಕವಾದ ಭಾಷಾಶರೀರದಲ್ಲಿ   ಅವತರಣಗೊಂಡಿರುವ ಈ ಅಕ್ಷರ ಮಾಧ್ಯಮ , ಸದಾ ಹೊಸತನದಿಂದ ಕಂಗೊಳಿಸುತ್ತವೆ . ಆವಾವ ಕಾಲದ ಗುಣ ಶೀಲ ಮತ್ತು ಬದುಕಿನ ಗತಿಬಿಂಬಗಳನ್ನು ಮೈಗೂಡಿಸಿಕೊಳ್ಳುವ ಕಾವ್ಯಕಲೆ ಅದೊಂದು ಮನಸ್ಸಿನ ಉನ್ನತ ಪ್ರತಿಭಾ ಪ್ರತಿಕ್ರಿಯೆ .   ಕಾವ್ಯದ ಭಾಷೆ ಕಾವ್ಯದ ಅಭಿವ್ಯಕ್ತಿ   ಗದ್ಯ ಅಥವಾ ಮಾತಿನ ಹಾಗಲ್ಲ . ಇದೂ ತನ್ನ ಹರಿವಿಗೆ ಭಾಷೆಯನ್ನೇ ಅವಲಂಬಿಸಿದರೂ   ಅದು ಕೇವಲ ಒಂದು ಮಾಧ್ಯಮ ಅಷ್ಟೇ . ಕವಿಯ ಅಂತರ A ಗದಲ್ಲಿ ಚಿಮ್ಮುವ ಭಾವ ಪ್ರವಾಹಕ್ಕೆ ಭಾಷೆ ಸಾತ್ ನೀಡುತ್ತದೆ . ವಿವಿಧ ಪ್ರತಿಮೆ ಪ್ರತೀಕ ಉಪಮೆ ಛಂದಸ್ಸು ಗಳೆಂಬ ಸಾಧನ ಬಳಸಿ ಹೊಸದೊಂದು ಆರ್ಥಪರಂಪರೆಯನ್ನು ಸೃಷ್ಟಿಸಿ ಸಹೃದಯನ ಭಾವಕೋಶವನ್ನು ಸೇರಿಕೊಳ್ಳುತ್ತದೆ . ಒಂದೊಂ ದು ಮನಸ್ಸಿನಲ್ಲಿಯೂ ವೈವಿಧ್ಯಮಯ ಭಾವನೆಯ ಅಲೆಗಳನ್ನು ಸೃಷ್ಟಿಸುತ್ತದೆ .   ಕಾವ್ಯ ಅಂದರೆ ಭಾವ ಭಾವಗಳ ನಡುವೆ   ಹೃದಯ ಹೃದಯಗಳ ನಡುವೆ ಐಕ್ಯತೆಯನ್ನು ನಿರ್ಮಿಸುವ ಒಂದು ಅದ್ಭುತ ...