ವಿಷಾದದ ಒಡಲಲ್ಲಿ ಆಶಾವಾದದ ಕಡಲು.ʼʼ
ಭೂವ್ಯೋಮ ಪಾತಾಳವೊಂದಾಗಿ / ಕರ ಕರ ಗರ ಗರ ಢಂ ಢಮಾರ್ / ಆರ್ಭಟಿಸಿ ಬಡಿವ ರಣಭೇರಿ.// ಎದೆಯೆದೆಯ ಗೂಡಿನಲ್ಲೂ / ಹೊತ್ತಿ ಉರಿವ ಹಿರೋಶಿಮಾ /ಪ್ರತಿ ಮನದ ಒಳಗೂ / ಧಗ ಧಗಿಸುವ ಕುರುಕ್ಷೇತ್ರ // ಎಲ್ಲಿದೆ ಮನುಕುಲಕೆ ಚಣದ ನಿಶ್ಚಿಂತ ನಿದ್ರೆ..?/ ಎಲ್ಲಿ ತಥಾಗತನ ಅಭಯ ಮುದ್ರೆ....?? (ಶೋಕ ಚಕ್ರ) ಮನಸ್ಸು ಮರುಭೂಮಿಯಾಗಿ ಮಾರ್ಪಡುವಾಗಲೆಲ್ಲ ಜೀವಪರ ಚೈತನ್ಯವನ್ನು ಎಳೆದು ತಂದು ಮರುವೂಡಿಸುವ ಭಗೀರಥ ಯತ್ನ ಬದುಕನ್ನು ಸಹ್ಯವಾಗಿಸ ಬಲ್ಲದು. ಆಧುನಿಕತೆಯ ಮಹಾ ಅಮಲು ಮತ್ತು ಸಾಂಪ್ರದಾಯಿಕತೆಯ ಜಡತೆಯಂತ ದೌರ್ಬಲ್ಯಗಳು, ಸಂಸ್ಕೃತಿಯ ತಳವನ್ನೇ ಘಾಸಿ ಗೊಳಿಸುತ್ತಿರುವಾಗ ಮಾನವೀಯ ಮೌಲ್ಯದ ಧ್ಯಾನ ಮಾತ್ರ ಜೀವಂತಿಕೆಯನ್ನು ಸೃಷ್ಟಿಸಬಲ್ಲದು. ಅಂತಹದೊಂದು ಮಾತೃಸಂಹಿತೆಯ ಸಜೀವ ಚಿಲುಮೆ ...