ʻʻಬಾಣ ಭಟ್ಟ, ಭಾಷೆಗೆ ಹೊಸ ಬೆಳಕು ಕೊಟ್ಟ.ʼʼ
ʻʻ ಹಣಕ್ಕೆ ಸ್ನೇಹದ ಬಂಧನವಿಲ್ಲ. ಕುಲದ ಗುರುತಿಲ್ಲ. ರೂಪದ ಒಲವಿಲ್ಲ. ಒಂದೇ ಮನೆತನದಲ್ಲಿ ಬಹುಕಾಲ ಉಳಿಯುವ ಅಭ್ಯಾಸವಂತೂ ಇಲ್ಲವೇ ಇಲ್ಲ. ಅದು ಸ್ವಭಾವವನ್ನು ಕಾಣದು. ಪಾಂಡಿತ್ಯವನ್ನು ಗಣಿಸದು. ಶಾಸ್ತ್ರವನ್ನು ಆಲಿಸದು. ಧರ್ಮವನ್ನು ನಂಬದುʼʼ . ( ಬಾಣ ಭಟ್ಟ) ಶ್ರೇಷ್ಠ ಸಾಹಿತ್ಯಕೃತಿಗೆ ಕಾಲದ ಹಂಗಿಲ್ಲ. ಸಾರ್ವಕಾಲಿಕವಾಗಿ ತನ್ನ ಜೀವಂತಿಕೆಯನ್ನ, ಹೊಸತನವನ್ನ ಸದಾ ಕಾಯ್ದುಕೊಂಡು, ವರ್ತಮಾನದ ಮಾನವ ಬದುಕಿಗೆ ಸಾಂತ್ವನ ನೀಡುತ್ತಲೇ ಇರುತ್ತದೆ. ಮಾನವ ಬದುಕಿನ ನೋವು ತಲ್ಲಣಗಳಿಗೆ ಸ್ಪಂದಿಸುತ್ತ, ಮಾನವ ದೌರ್ಬಲ್ಯಗಳೆಡೆಗೆ ಕ್ಷ ಕಿರಣ ಬೀರುತ್ತ, ಎಚ್ಚರ ಮೂಡಿಸುತ್ತಲೇ ಇರುತ್ತದೆ. ರಾಮಾಯಣ ಮಹಾಭಾರತಗಳು ಸೇ...