ವಿಶ್ವಂಭರ –
6. ಸುಮನಾಂಬರ ಅಂಕಣ – 24.
ಕಥನ ಕೃಷಿಕ ಟಿ.ಎಂ. ಸುಬ್ಬರಾಯ.
``ºÀjªÀ £À¢UÉ
ªÉÄÊAiÉÄ®è PÁ®Ä
GjªÀ QaÑUÉ ªÉÄÊAiÉÄ®è
£Á°UÉ
©Ã¸ÀĪÀ UÁ½UÉ ªÉÄÊAiÉÄ®è PÉÊ
UÀĺÉñÀégÀ ¤ªÀÄä ±ÀgÀtAUÉ
¸ÀªÁðAUÀªÉ®è °AUÀ. ’’ [C®èªÀÄ¥Àæ¨sÀÄ]
M§â ¸Á»wUÀÆ
¸ÁªÀiÁ£Àå¤UÀÆ C¨sÀåAvÀgÀ«zÉ. ¸ÁªÀiÁ£Àå vÀ£Àß §zÀÄQ£À «ÄwAiÀİèAiÉÄà dUÀvÀÛ£ÀÄß CxÉÊð¹zÀgÉ ¸Á»w vÀ£Àß §zÀÄQ£À J®è ¸ÀÄR zÀÄBR UÀ¼ÉÆA¢UÉÃ
dUÀwÛ£À Kj½vÀUÀ½UÉ vÀ£Àß C©üªÀåQÛAiÀÄ ªÀÄÆ®PÀ
¥ÀæwQæ¬Ä¸ÀÄvÁÛ£É.»ÃVgÀĪÀÅzÀQÌAvÀ
»ÃVzÀÝgÉ ºÉÃUÉ JA§ ¥Àæ±ÉßAiÀÄ
eÁqÀÄ»rzÀÄ vÀ£Àß ªÀvÀðªÀiÁ£ÀPÉÌ ªÀÄÄSÁªÀÄÄTAiÀiÁUÀÄvÀÛ ¨sÀ«µÀåzÀ PÀ£À¹UÉ
zÁAUÀÄr¬ÄqÀÄvÁÛ£É. ªÀiÁ£ÀªÀ §zÀÄQ£À gÀÆ¥À PÀÄgÀÆ¥ÀUÀ¼À£ÀÄß PÀ¯ÉAiÀÄ
ªÀiÁzsÀåªÀÄzÀ°èzÁR°¸ÀÄvÁÛ ¸ÁUÀÄvÁÛ£É. PÀ¯É ¨ÉÃgÉAiÀÄ®è, ¸Á»w ¨ÉÃgÉAiÀÄ®è. ವೈಯಕ್ತಿಕ ಬದುಕಿನ ತಲ್ಲಣಗಳು ವೇದನೆ ಯಾದರೆ, ಸಮುದಾಯದ ತಲ್ಲಣಗಳಿಗೆ ಸ್ಪಂದಿಸುವುದು
ಸಂವೇದನೆ. ¸Á»wAiÀÄ ¸ÀȶÖAiÀİè DvÀ£À §zÀÄPÀÄ
¸ÀA¸ÀÌøw D¸ÀQÛ fêÀ£ÀzÀ馅 J®èªÀÇ C£ÉÆåãÀåªÁV ¨ÉgÉwgÀÄvÀÛzÉ. ¸Á»wAiÀÄ ¸ÀȶÖ
JAzÀgÉ CªÀ£À ¥Àj¸ÀgÀzÀ CªÀ¤UÉzÀÄgÁzÀ
ªÁ¸ÀÛªÀzÀ J®è C£ÀĨsÀªÀUÀ¼ÀÆ ¸À«Ää½vÀUÉÆAqÀ MAzÀÄ ¸ÀÄAzÀgÀ ¸ÀÄ¥ÀĵÀÖ
PÀ¯ÁPÀæwAiÀiÁV gÀÆ¥ÀÄUÉÆ¼ÀÄîªÀ QæAiÉÄ. ¯ÉÃRPÀ¤UÉ
ªÉÆlÖªÉÆzÀ®Ä DvÀ£À gÀZÀ£É RͤÃqÀ¨ÉÃPÀÄ. CªÀ£À£ÀÆß «ÄÃj C£ÀĨsÀªÀ ¸ÀªÀÄÈ¢Þ¬ÄAzÀ
«ÄAZÀ¨ÉÃPÀÄ. C£ÀĨsÀªÀ CPÀëgÀzÀ
ªÀiÁzsÀåªÀÄzÀ°è CªÀvÀj¸ÀĪÁUÀ CzɵɯÖà CVߢªÀåzÀ°è ¨ÉAzÉzÀÄÝ §gÀ¨ÉÃPÀÄ. ªÉÆzÀ®Ä
¨sÁµÉ M°AiÀĨÉÃPÀÄ. ¨sÁªÀPÀÆÌ ¨sÁµÉUÀÆ
¨ÁAzsÀÀªÀå K¥ÀðqÀ¨ÉÃPÀÄ. DUÀ ªÀiÁvÀæ CPÀëgÀzÀ ²¯ÉAiÀİè C¸ÁªÀiÁ£Àå ²®à
ºÉÆgÀ ºÉÆ«ÄäÃvÀÄ. ¸ÀºÀÈzÀAiÀÄgÀ D¼ÀzÀ®Æè
¨sÁªÀ ¸ÀAZÀ®£ÀªÀ£ÀÄß ¸ÀȶֹÃvÀÄ. CAxÀºÀ ¸ÀAZÀ®£À ¸ÀȶֹzÀ n.JªÀiï ಸುಬ್ಬರಾಯರ ಸೃಜನಶೀಲÀ ಸುದೀರ್ಘ ¸ÁಧÀ£É ಹೊಸ ತಲೆಮಾರಿಗೊಂದು ದಾರಿದೀಪ. DzsÀĤPÀ PÀ£ÀßqÀ ¸Á»vÀåzÀ
¸ÀAzÀ¨sÀðzÀ°è CzsÀð ±ÀvÀªÀiÁ£ÀPÁ®
ªÉÊ«zsÀåªÀÄAiÀÄ ¸Àȶ֬ÄAzÀ NzÀÄUÀgÀ ªÀÄ£ÀzÀ°è vÀªÀÄäzÉà DzÉÆAzÀÄ «²µÀÖ¸ÁÜ£À
¸ÀȶֹPÉÆAಡಿರುವ ಸುಬ್ಬರಾಯರು ಈ ಎಂಬತ್ತರ ಇಳಿವಯದಲ್ಲೂ
ಕ್ರಿಯಾಶೀಲರಾಗಿಯೇ ಇದ್ದಾರೆ.
¨É¼ÀQ£À £À¢ ±ÀgÁªÀw
²ªÀÄªÉÆUÀÎ f¯ÉèAiÀİè d¤ä¹ GvÀÛgÀPÀ£ÀßqÀ f¯ÉèAiÀÄ PÀgÁªÀ½AiÀÄ°è ºÀjzÀÄ
¸ÀªÀÄÄzÀæ ¸ÉÃgÀÄvÁÛ¼É. ¸ÀħâgÁAiÀÄgÀÄ CzÉà ±ÀgÁªÀwªÀÄÆ®¢AzÀ ¸ÀܼÁAvÀgÀUÉÆAqÀÄ
Cj«£À ¥ÀæªÁºÀsಸೃಷ್ಟಿಸಿ, f¯ÉèAiÀģɯßAzÀ®èzÉà Erà gÁdåzÀ ¸Á»vÀ妿AiÀÄgÀ ªÀÄ£À
UÉ¢ÝzÀÄÝ «±ÉõÀ. ±ÀgÁªÀwAiÀÄ ºÀjªÀÅ
¤AwvÀÄ. ¸ÀħâgÁAiÀÄgÀ Cj«£À a®ÄªÉÄ GvÀÛgÀ PÀ£ÀßqÀ f¯ÉèAiÀİè a«ÄävÀÄ. CªÀgÀ
HgÀÄ ²gÀ¹ ¸À«ÄÃ¥ÀzÀ PÀÄ¥Àà½îAiÀÄ gÁdgÁeÉñÀéj ¤®AiÀÄ PÉÌ ºÉÆÃzÁUÀ¯É®è £Á£ÀÄ
GzÉÆÏö¹¢ÝzÉ. ¸ÀħâgÁAiÀÄgÉÆA¢UÉ CªÀgÀ vÀªÀÄäA¢gÁzÀ dUÀ¢Ã±À ªÀÄvÀÄÛ gÀªÉÄñÀ gÀÆ ±ÉæÃµÀ×
PÀvÉUÁgÀgÉÃ. ¸ÁPÀµÀÄÖ ¥Àæ±À¹ÛUÀ¼À£ÀÆß ¥ÀqÉ¢gÀĪÀ CªÀgÀ ¸ÁzsÀ£ÉAiÀÄ£ÀÆß
UÀªÀĤ¹zÁUÀ £À£ÀUÀ¤¹zÀÄÝ CªÀgÀ ¤ªÁ¸ÀPÉÌ `` PÀxÁ±ÉÊ®’’ªÉAzÉÃPÉ £ÁªÀÄPÀgÀt UÉÆ½¸À¨ÁgÀzÀÄ ? PÀĪÉA¥ÀÄ PÀÄ¥À½
PÀ«±ÉÊ®ªÉAzÁzÀAvÉà ಈ ಕುಪ್ಪಳ್ಳಿ
PÀxÁ±ÉÊ®ªÁUÀ¨ÁgÀzÉà ? JA¢zÉÝ. ನಂತರದಲ್ಲಿ ತಮ್ಮ ನಿವಾಸಕ್ಕೆ ಕಥಾಶೈಲವೆಂದೇ ನಾಮಕರಣ ಗೈದಿದ್ದಾರೆ.
²ªÀªÉÆUÀÎ f¯ÉèAiÀÄ vÉAPÉÆÃqÀÄ ªÀÄ£ÉAiÉÄA§
C£Á¢ UÁæªÀÄzÀ PÀÆqÀÄ PÀÄlÄA§zÀ°è ºÀÄnÖ ¨É¼ÉzÀÄ Dr NrzÀ, N¢ £À°zÀ ªÀÄ£À¸ÉÆìAzÀÄ
CªÉ®èªÀ£ÀÆß vÉÆgÉzÀÄ C¤ªÁAiÀÄðªÁV ¸ÀܼÁAvÀgÀ UÉÆ¼ÀÄîªÀ ¹Üw ¤ªÀiÁðt UÉÆArvÀÄ. ಶರಾವತಿ ಜಲವಿದ್ಯುತ್
ಯೋಜನೆ, ಅವರ ಹುಟ್ಟೂರನ್ನು ಮುಳುಗಿಸಿ
ಆಪೋಷನ ತೆಗೆದುಕೊಂಡಿತು. D zÁgÀÄt £ÉÆÃವು,É ªÀÄvÉÆÛAzÀÄ ¸ÀܼÀ
CzɵÉÖà ¸ÀA¥ÀvÀÄÛ ¤ÃrzÀgÀÆ ±ÀªÀÄ£ÀUÉÆ¼Àî¯ÁgÀzÀÄ
JA§ÄzÀPÉÌ ¸ÀħâgÁAiÀÄgÉà ¸ÁQëAiÀiÁUÀÄvÁÛgÉ. C¤ªÁAiÀÄð MvÀÛqÀzÀ ¸ÀܼÁAvÀgÀ D ¸ÀªÀÄÄzÁAiÀÄzÀ ±Á±ÀévÀ AiÀiÁvÀ£ÉUÉ
PÁgÀtªÁUÀÄvÀÛzÉ JA§ÄzÀÄ ¸ÀħâgÁAiÀÄgÀ ºÉaÑ£À PÀvÉ PÁzÀA§jUÀ¼À°è zÁR¯ÁVªÉ. ¨É¼ÀQUÁV
vÁåUÀUÉÊzÀ ¸ÀªÀÄÄzÁAiÀÄzÀ §zÀÄQ£À
¸ÀAªÉÃzÀ£É ¸ÀzÁ PÀvÀÛ¯ÉAiÀİè, £ÀµÀÖUÉÆAqÀ, £É® £ÁqÀÄ ªÀÄvÀÄÛ ¸ÀA¸ÀÌøwAiÀÄ
£É£À¥ÀÄUÀ¼ÉÆA¢UÉ fë¸ÀÄvÀÛzÉ JA§ ªÀiÁvÀÄ PÀÈwUÀ¼À°è C£ÀÄgÀt£À UÉÆ¼ÀÄîvÀÛzÉ. ¸ÀܼÁAvÀgÀzÀ ¸ÀÄqÀĪÀ £ÉÆÃªÀÅ, D¼ÀzÀ
¸ÀȶֲîvÉAiÀÄ DºÁèzÀದ PÁªÀÅ ¸ÀħâgÁAiÀÄgÀ
¸ÀÈd£À²Ã® ªÀåQÛvÀéªÀ£ÀÄß gÀƦ¹zÉ J£Àß§ºÀÄzÁVzÉ.
2003 gÀ°è DªÀµÀðzÀ CwêÀ ªÀļÉPÉÆgÀvɬÄAzÀ ±ÀgÁªÀw
DuÉÃPÀlÄÖ vÀÄA©gÀ¯Éà E®è. ªÉÄà wAUÀ½£À°è d¯Á£ÀAiÀÄ£À ¥ÀæzÉñÀUÀ¼É®è §gÀqÀÄ
ªÀÄgÀĨsÀÆ«ÄAiÀiÁV ªÀiÁ¥ÀðnÖvÀÄÛ. J°è
£ÉÆÃrzÀgÀÆ ¸ÀvÀÛ ªÀÄgÀUÀ¼ÀÄ vÀÄA©zÀ
ºÀƼÀÄ ªÀÄļÀÄVzÀ C¸ÀARå HgÀÄUÀ¼À ªÀÄ£É
gÀ¸ÉÛ zÉêÁ®AiÀÄUÀ¼À C¹Û¥ÀAdgÀUÀ¼ÀÄ. J¯ÉèAzÀgÀ°è ¸ÀvÀÛ UÀAzsÀzÀ ªÀÄgÀUÀ¼À£ÀÄß
¨ÉÃgÀĸÀ»vÀ QvÀÄÛ ¸ÁV¹zÀ UÀÄgÀÄvÀÄUÀ¼ÀÄ. DUÀ C©üªÀÈ¢Þ JA§ ¨sÀæªÉÄ ¸ÀȶֹzÀ PÀÆægÀ PÀÄgÀÄPÉëÃvÀæªÁV D ¥ÀæzÉñÀ
PÁrvÀÄÛ. C°è £ÀqÉzÁqÀĪÁUÀ
¸ÀħâgÁAiÀÄgÀAxÀ ¸ÀܼÁAvÀjUÀ¼À £É£À¥ÀÄ ¸ÀºÀdªÁV ªÀÄ£À¹ì£À°è
vÀÄA©PÉÆArvÀÄ. D «µAiÀĪÀ£ÀÄß
CªÀgÉzÀÄgÀÄ ¥Àæ¸Áܦ¹zÁUÀ `` ¤ÃgÁjzÁUÉ®è £Á£ÀÄ
£À£Àß Hj£À CªÀ±ÉõÀUÀ¼À£ÀÄß PÀtÄÝA©PÉÆ¼Àî®Ä CªÀ±Àå D¸ÀܼÀPÉÌ
zsÁ«¸ÀÄvÉÛãÉ. C°è £Á£ÀÄ ªÀÄvÉÛ ¥ÀÄ£Àdð£Àä ¥ÀqÉzÀÄ »A¢gÀÄUÀÄvÉÛãÉ, ºÁUÉ
ºÉÆÃzÁUÀ¯É®è £Á£ÀÄ ªÀÄvÀÛµÀÄÖ ¨sÁªÀ¥ÀgÀªÀ±À£ÁV¢ÝzÉ. ºÉÆZÀÑ ºÉƸÀ PÀvÉUÀ¼ÀÄ
¸ÁPÀµÀÄÖ ¸ÀȶÖAiÀiÁVªÉ.É’’JAzÀÄ £ÉÆÃ«£À°è £ÀÄr¢¢ÝzÉ.
EwÛÃZÉUÉ CªÀgÀÄ §gÉzÀ
DvÀäPÀxÉAiÀİèAiÀiÁUÀ°Ã E½©¹®Ä, £É£À¦£À
£ÉgÀ¼ÀÄ, ªÀÄgÀUÀÄr, ¨ÉÃgÀÄ ©¼À®Ä,¸ÀªÀiÁUÀªÀÄ, ªÀÄÄAvÁzÀ ºÀ®ªÀÅ ಕಾದಂಬರಿ PÀÈwUÀ¼À°è
¸ÀܼÁAvÀgÀzÀ ¸ÀÆPÀëöä C£ÀĨsÀªÀUÀ¼ÀÄ ªÀÄ£ÀªÀÄÄlÄÖªÀAvÉà awævÀªÁVªÉ.
`` ¸ÀéUÁðzÀ¦ UÀjÃAiÀĹ’’ PÁzÀA§jAiÀÄ
¥ÁægÀA¨sÀzÀ°èAiÉÄà §gÀĪÀ F «ªÀgÀªÀ£ÀÄßUÀªÀĤ¸À §ºÀÄzÁVzÉ.
``F
°AUÀ£ÀªÀÄQÌ DuÉà PÀnÖ¤AzÀ ªÀÄzsÀÄgÁ¼À ºÀÄlÆÖgÀÄ ªÀiÁvÀæªÀ®è, ¨sÁgÀAV ºÉÆÃ§½AiÀÄ
ªÀÄÄPÁÌ®Ä ¥Á®Ä ªÀÄļÀÄUÀqÉAiÀiÁ¬ÄvÀÄ. ±ÀgÁªÀw £À¢AiÀÄ D §¢AiÀÄ ªÀļÀ°Ã ¹ÃªÉÄ F
§¢AiÀÄ ªÀÄgÀUÀÄr ¹ÃªÉÄUÀ¼À §ºÀÄvÉÃPÀ ¨sÁUÀ ªÀÄļÀÄUÀqÉAiÀiÁzÀªÀÅ. ºÁ¼ÀÄzÉÆÃl, ¤nè, UÉÆÃUÀrUÉ, dQÌ£À ªÀÄÄqÀPÉ,
CgÉúÁ¼À, UÀħâUÉÆÃqÀÄ, VArêÀÄ£É, MAzÉÃ
JgÀqÉà ªÀļÀ°Ã ¹ÃªÉÄAiÀÄ £ÀÆgÁgÀÄ PÀÄlÄA§UÀ¼ÀÄ,ªÀÄgÀUÀÄr ¹ÃªÉÄAiÀÄ ºÁA¸É,
vÉAPÉÆÃqÀÄ, UÀÄAqÀƪÀÄ£É,²gÀƪÀÄ£É, PÉÆ¥ÀàjUÉ, ¸À¹, ªÀÄPÀjÃPÉÆ¥Àà, ªÀPÀÌnÖ,
vÀÄA§½î, G¥Àì, PÀgÀƪÀÄ£É, UÉÆÃ½ºÀPÀÄè, PÀAaPÁ¬Ä, »ÃUÉ ºÀvÀÄÛ ºÀ®ªÀÅ HgÀÄ-PÉÃj
ªÀÄ£É ªÀÄoÀ °AUÀ£À ªÀÄQÌAiÀÄ »¤ßÃj£À°è ªÀÄļÀÄV ºÉÆÃzÀªÀÅ.ªÉÆzÀ°UÉ MAzÀÄ ¨Áj F
ªÀÄļÀÄUÀqÉUÉ FqÁV ¸ÀܼÁAvÀgÀUÉÆArzÀÝ, ºÉƸÀ ¸ÀȶÖUɼɹ,E£ÉßãÀÄ ¥sÀ¸À®Ä PÉÊUÉ
§AvÀÄ J£ÀÄߪÀ ºÀAvÀzÀ°è ...E£ÀÄß ¸ÀA¸ÁgÀ §zÀÄPÀÄ ¤gÀÄA§¼ÀªÁV ¸ÁUÀ§ºÀÄzÀÄ JAzÀÄPÉÆ¼ÀÄîwÛzÀÝ
¸ÀAzÀ¨sÀðzÀ°è CdÓ ²æÃ¥ÁzÀgÁAiÀÄgÀ ¥Á°UÉ ªÀÄvÉÆÛAzÀÄ ªÀÄļÀÄUÀqÉ £ÀÄAUÀ¯ÁgÀzÀ
vÀÄvÁÛ¬ÄvÀÄ.’’
±ÀgÁªÀwAiÀÄ «zÀÄåzÁ°AUÀ£ÀzÀ°è CªÀgÀÄ
ºÉ¸Àj¹zÀ £ÀÆgÁgÀÄ PÀÄlÄA§UÀ¼ÀÄ, ºÀ½î ºÀ¼Àî PÉÆ¼ÀîUÀ¼ÀÄ CPÀëgÀµÀB ªÀÄļÀÄV
ºÉÆÃzÀgÀÆ PÀÈwUÀ¼À°è ªÀÄvÉÛ ªÀÄgÀĺÀÄlÄÖ ¥ÀqÉzÀÄ £À¼À£À½¸ÀÄwÛªÉ.
¸ÀܼÁAvÀgÀUÉÆAqÀ CzɵɯÖà PÀÄlÄA§UÀ¼ÀÄ FªÀgÉUÀÆ «¼Á¸À«®èzÉà ¸ÀܼÁAvÀjUÀ¼À
¸ÀA¥ÀPÀð¢AzÀ¯Éà vÀ¦à¹PÉÆAqÀ GzÁºÀgÀuÉUÀ¼ÀÄ CzɵɯÖÃ. ¯ÉÃRPÀgÀ E£ÉÆßAzÀÄ PÁzÀA§j
``¨ÉÃgÀÄ-©¼À®Ä’’ «£À°è MAzÀÄ ¸À¤ßªÉñÀªÀ£ÀÄß ªÀÄvÉÛ GzÀºÀj¸À§ºÀÄzÁVzÉ.
``zÉÆqÀØ¥Àà£À
ªÀÄUÀ ªÀĺÁ§®Vj vÀåAPÉÆÃqÀÄè
ªÀÄļÀÄUÀqÉAiÀiÁzÀªÉÄÃ¯É F d«ÄãÀÄ ¥À«ÄãÀÄ ¸ÀºÀªÁ¸ÀªÉÃ
¸ÁPÀÄ,£ÉÆÃrAiÀiÁ¬ÄvÀ®è £ÁªÀÅ ªÉÄÊ ªÀÄÄjzÀÄ CrPÉ ¸À¹ ºÀaÑ, CzÀÄ ¦ÃPÀÄ §gÉÆÃ
ºÉÆwÛUÉ F¸ÀgÀPÁgÀzÉÆÃgÀÄ MAzÀÄ qÁåªÀÄÄ PÀlÄÖvÁÛgÉ. ¦ÃPÀÄ §gÉÆÃ CrPÉ ªÀÄgÀ ¤ÃgÀÄ¥Á¯ÁUÀÄvÀÛzÉ.
PÀÄA¨ÁgÀ¤UÉ ªÀµÀð qÉÆuÉÚUÉ ¤«ÄµÀ, J£ÀÄßvÁÛgÀ®è... ºÁUÉ. £ÀªÀÄä fëvÁªÀ¢üAiÀÄ
zÀÄrªÉÄAiÉÄ®è ¤ÃgÀÄ¥Á®Ä. JAzÀÄ ºÉý ªÉÄʸÀÆjUÉÆÃ J°èUÉÆÃ ºÉÆÃzÀ£ÀAvÉ.CªÀ£ÀÄ
ªÀÄÄAzÉ K£ÀÄ ªÀiÁrPÉÆArzÁÝ£ÉÆÃ ªÀÄzÀÄªÉ ªÀÄPÀ̼ÀÄ D¬ÄvÉÆÃ E®èªÉÇà CzÀÆ £À£ÀUÉ
w½AiÀÄzÀÄ....J£ÀÄßwÛzÀÝ C¥Àà.’’
zÉñÀ«rà §ÈºÀvï DuÉÃPÀlÄÖUÀ¼À ¤ªÀiÁðt
DUÀÄvÀÛ¯Éà EzÉ. ®PÀë ®PÀë ¤gÁ²ævÀgÀ ¸À馅 dgÀÄUÀÄvÀÛ¯Éà EzÉ. C©üªÀÈ¢ÞAiÀÄ
ºÉ¸Àj£À°è «£Á±ÀzÀ ¸ÀgÀt CªÁåºÀvÀªÁV ¸ÁUÀÄwÛgÀĪÁUÀ ¤gÁ²ævÀgÀ ¹Üw-UÀwUÀ¼À
¥ÀgÀA¥ÀgÉ ¸ÀA¸ÀÌøw UÀ¼À ªÉÊeÁÕ¤PÀ CzsÀåAiÀÄ£À E£ÀÆß ªÀåªÀ¹ÜvÀªÁV
¥ÁægÀA¨sÀUÉÆAr®è. ªÀÄÄAzÉ AiÀiÁgÁzÀgÀÆ
CzsÀåAiÀÄ£À PÉÊUÉÆAqÀ°è CzÀÄãvÀ DPÀgÀ ¸ÀħâgÁAiÀÄgÀ PÀÈwUÀ¼À°è zÉÆgÀPÀÄvÀÛzÉ.
¸ÀܼÁAvÀgÀ UÉÆAqÀgÀÆ ¨ÉZÀÑ£À ªÀÄ£É
ªÉZÀÑPÉÌ ºÉÆ£ÀÄß EZÉÒAiÀÄ£ÀjªÀ ¸Àw ¸ÀÄvÀgÀ£ÀÄß ¥ÀqÉ¢gÀĪÀ ¸ÀħâgÁAiÀÄgÀÄ G½zÀ
²æÃ ¸ÁªÀiÁ£ÀågÀAvÉà vÀªÀÄä a¦à£À°èAiÉÄà ¨ÉZÀÑUÉà §zÀÄPÀ§ºÀÄzÁVvÀÄÛ. DzÀgÉ
¸ÀĪÀÄä£Éà PÀĽwgÀĪÀ eÁAiÀĪÀiÁ£À CªÀgÀzÀ®è. czÀæUÉÆAqÀ PÀÆqÀÄ PÀÄlÄA§
J¯Éè¯ÉÆèà ZÀzÀÄj £É£À¦¤AzÀ¯Éà ªÀiÁ¹ºÉÆÃUÀ§ºÀÄzÉA§ PÀPÀÄ̯ÁwAiÀÄ°è ªÀÄvÉÆÛAzÀÄ
CzÀÄãvÀ ¸ÁzsÀ£É UÉÊAiÀÄÄvÁÛgÉ. ªÀÄÆgÁß®ÄÌ f¯Éè,zÉñÀ «zÉñÀUÀ¼À ««zsÀ
gÁdåUÀ¼À°è ºÀjzÀÄ ºÀAaºÉÆÃzÀ vÀªÀÄä ªÀA±ÀzÀ J®è §AzsÀÄUÀ¼À ¸ÀA¥ÀÆtð
«ªÀgÀUÀ¼À£ÀÄß PÀ¯ÉºÁQ¥ÀæPÀn¹zÀ §ÈºÀvï PÀÈw ``PÀ®UÀ¯ï
ªÀA±À’’ EwÛÃZÉUÉ ©qÀÄUÀqÉAiÀiÁVzÉ. ¸Á«gÀPÀÆÌ «ÄÃjzÀ ¥ÀÄlUÀ¼ÀÄ, £ÀÆgÁgÀÄ
¸ÀºÀPÀÄlÄA©UÀ¼À ¸ÀÆPÀëöä «ªÀgÀUÀ¼ÀÄ zÁR¯ÉUÉÆAqÀ, ªÀĺÀvÀé¥ÀÆtð PÀÈwAiÀiÁV
ºÉÆgÀºÉÆ«ÄäzÉ. EAxÀ ¥ÀæPÀluÉAiÀÄ ¸ÁºÀ¸À £ÀªÀÄä gÁdåzÀ°è PÀéavÁÛV
£ÀqÉ¢zÉAiÀÄAvÉ. ¥Àæ¸ÀÄÛvÀ PÀÈwgÀZÀ£ÉAiÀÄ
¸ÀAzÀ¨sÀðzÀ°è ¯ÉÃRPÀgÀÄ UÉÊzÀ PÉëÃvÀæPÁAiÀÄð ªÀiÁzÀjAiÀiÁzÀÄzÀÄ. ¸Àj¸ÀĪÀiÁgÀÄ
400 ªÀµÀðUÀ¼À PÀ®UÀ¯ï ªÀA±ÀzÀ EwºÁ¸ÀªÀ£ÀÄß PÀ¯ÉºÁQzÀ ¸ÀħâgÁAiÀÄgÀ ¸ÁºÀ¸À
AiÀiÁªÀÅzÉà qÁPÀÖgÉÃmï ¥Àæ§AzsÀªÀ£ÀÆß «ÄÃj¸ÀĪÀ ±ÀQÛ ¥ÀqÉ¢zÉ. CdÓ ªÀÄÄvÀÛdÓA¢gÀ
ºÉ¸ÀgÉà £É£À¦®èzÀ EA¢£À vÀ¯ÉªÀiÁj£À ¥ÀæwAiÉÆ§âjUÀÆ ¥ÀgÀA¥ÀgÉ vÀ¯ÉªÀiÁgÀÄUÀ¼À
ªÀĺÀvÀéªÀ£ÀÄß Cj«UÉ vÀAzÀÄ PÉÆqÀĪÀ, CxÀð¥ÀÆtð ¥ÀæQæAiÉÄ EzÁVzÉ.
¸ÀħâgÁAiÀÄgÀ¯ÉÆè§â PÀ¯Á«zÀ¤zÁÝ£É,
PÀ«¬ÄzÁÝ£É, ¸ÀA±ÉÆÃzsÀPÀ, ªÁVä £ÁlPÀPÁgÀ PÁzÀA§jUÁgÀ, PÀvÉUÁgÀ, ªÀÄvÀÄÛ
¸ÁA¸ÀÌøwPÀ ¸ÀAWÀlPÀjzÁÝgÉ. ¨sÁªÀ£É ªÀÄvÀÄÛ ªÉÊZÁjPÀvÉ ¸ÀªÀĪÁV ¨ÉgÉwgÀĪÀ
ªÀåQÛvÀézÀ D¼ÀzÀ°è ¹r«Är vÀºÀvÀºÀ«zÉ. ªÀÄÄA¢£À
¢£ÀUÀ¼À°è CªÀgÀ ªÀåQÛvÀéªÉà MAzÀÄ C¨sÁå¸ÀAiÉÆÃUÀåªÁV PÀÄvÀƺÀ® ªÀÄÆr¹zÀgÉ
D±ÀÑAiÀÄð«®è.
1989 gÀ°è ²gÀ¹AiÀÄ ²æÃ ªÀiÁjPÁA¨Á
zÉêÁ®AiÀÄzÀ wæ±ÀvÀªÀiÁ£ÉÆÃvÀìªÀzÀ £É£À¦UÁV
¸ÀħâgÁAiÀÄgÀ WÀ£À ¸ÀAWÀl£ÉAiÀİè gÁdåzÀ°èAiÉÄà C¥ÀgÀÆ¥ÀªÁzÀ ¸ÁA¸ÀÌøwPÀ
C©üAiÀiÁ£ÀªÉÇAzÀÄ ²gÀ¹AiÀİè WÀn¹zÀÄÝ MAzÀÄ C¥ÀƪÀð ¸ÀAzÀ¨sÀð. ºÀ¢ªÀÄÆgÀÄ
wAUÀ¼ÁzÀåAvÀ ¥Àæw wAUÀ¼ÀÄ MAzÀÄ ¸À¥ÁÛºÀ, dgÀÄVzÀ ªÉÊ«zsÀåªÀÄAiÀÄ ¸ÁA¸ÀÌøwPÀ ZÀlĪÀnPÉUÀ¼ÀÄ
¸ÀħâgÁAiÀÄgÀ ¸ÀAWÀl£Á ZÀvÀÄgÀvÉ, ¸ÁA¸ÀÌøwPÀ ¸ÀÆPÀëöä, ªÀÄvÀÄÛ ¥ÁgÀA¥ÀjPÀ
¥ÀæeÉÕ UÀ¼À£ÀÄß C£ÁªÀgÀt UÉÆ½¹vÀÄ. gÁdåªÀÄlÖzÀ aAvÀPÀgÀÄ, ¸Á»wUÀ¼ÀÄ, ¸ÀAVÃvÀ
±ÉæÃµÀ×gÀÄ, gÁd¤ÃwdÕgÀÄ, «eÁÕ¤UÀ¼ÀÄ, PÀ«UÀ¼ÀÄ ªÀÄvÀÄÛ AiÀÄPÀëUÁ£À
PÀ¯Á«zÀgÀÄUÀ¼À G¥À¹Üw¬ÄAzÀ f¯ÉèAiÀÄ ¸ÁA¸ÀÌøwPÀ ªÀÄtÂÚUÉ ¥sÀ®ªÀvÁÛzÀ ¸ÀvÀé
¤ÃrvÀÄ. D ¢£ÀUÀ¼À ¸Á»wåPÀ
«ZÁgÀ¸ÀAQgÀtzÀ°è ¥Àæ§AzsÀ ªÀÄAr¸ÀĪÀ CªÀPÁ±ÀªÀ£ÀÄß £À£ÀUÀÆ ¤ÃrzÀÝgÀÄ JA§ÄzÀÄ
MAzÀÄ ¸ÀÄAzÀgÀ £É£À¥ÀÄ. D¸ÀAzÀ¨sÀðPÉÌ PÀ¼É¤ÃrzÀªÀgÀ°è ªÀiÁfà ªÀÄÄRåªÀÄAwæ
§AUÁgÀ¥Àà, aAvÀPÀ ©.«.ªÉÊPÀÄAoÀgÁdÄ, ಗೌರೀಶ್ ಕೈಕಿಣಿ, ವಿಷ್ಣುನಾಯಕ್, ಎಚ್ಎಸ್ ವೆಂಕಟೇಶ
ಮೂರ್ತಿ, …
ªÀÄÄAvÁzÀ ¢UÀÎdgÀÄUÀ¼ÀÄ ¥ÀæªÀÄÄRgÀÄ.
¸Á»vÀåªÉà CAvÀªÀÄÄðTà aAvÀ£ÉAiÀÄ GvÀà£Àß.
ºÉaÑ£À §gÀºÀUÁgÀgÀÄ §gÀºÀzÀ ªÀÄÆ®PÀ ªÀiÁvÀæ d£ÀªÀiÁ£À¸ÀzÀ°è £É¯É¹zÀgÉ,
¸ÀħâgÁAiÀÄgÀ ªÀåQÛvÀéPÉÌ ¨ÁºÀåzÀ ªÉÄgÀVzÉ. CAvÀgÀAUÀzÀ ¸ËAzÀAiÀÄð«zÉ. ಆನುವಂಶೀಯವಾಗಿ ಬಂದ ಬಳುವಳಿ,
ಯಕ್ಷಗಾನದ ಅರ್ಥಕೌಶಲ. ಸಾಹಿತ್ಯ ಪುರಾಣಗಳ ಅಧ್ಯಯನದಿಂದ
ಪುಷ್ಟಗೊಂಡ ನುಡಿಗಾರಿಕೆ. §gÀºÀQæAiÉÄAiÀİè JµÀÄÖ ²¸ÉÆÛà ¸ÁA¸ÀÌøwPÀ ¸ÁªÀÄÄzÁ¬ÄPÀ
¸ÀAWÀl£ÉUÀ¼À°èAiÀÄÆ CµÉÖà ZÀÄgÀÄPÀÄ. CzÀÄ ¥ÀvÀæPÀvÀð¸ÀAWÀªÁUÀ°, AiÀÄPÀëUÁ£À
PÀÆlªÁUÀ° CªÀgÀÄ ¥ÀæªÉò¹zÀ°è ¥ÁgÀzÀ±ÀðPÀvÉ, ¸ÀºÀÈzÀAiÀÄvÉ, ¯ÉPÀÌ¥ÀvÀæUÀ¼À°è
¥ÁæªÀiÁtÂPÀvÉ, ¸ÀªÀÄAiÀÄ ¥ÀæeÉÕ AiÀÄAxÀ UÀÄtUÀ¼ÀÄ vÀ£ÀßAvÁ£Éà DªÀj¸ÀÄwÛzÀݪÀÅ.
CzÉà PÁgÀtPÉÌ CªÀgÉ®è ZÀlĪÀnPÉUÀ¼ÀÄ EAzÀÆ ²gÀ¹AiÀÄ°è ªÀÄ£É ªÀiÁvÁVªÉ.
ಮಾಸ್ತಿ,C£ÀPÀÈ vÀgÁ¸ÀÄ C±Àéxï
ಜಯಂತ ಕೈಕಿಣಿ, ಮುಂತಾದವರÀAvÉ PÀ£ÀßqÀ PÀxÁ¯ÉÆÃPÀzÀ°è ¥ÁægÀA¨sÀ¢AzÀ FªÀgÉUÀÆ ¸Á«gÁgÀÄ C©üªÀiÁ¤UÀ¼À£ÀÄß ¥ÀqÉ¢gÀĪÀ
¸ÀħâgÁAiÀÄgÀÄ ªÀÄÆgÀÄ vÀ¯ÉªÀiÁgÀÄUÀ¼À°è
¸Á»vÀ妿Ãw NzÀĪÀ C©ügÀÄaAiÀÄ£ÀÄß
G¢Ýæ¹zÀªÀgÁzÀgÀÆ ªÀÄzsÀåªÀÄ
gÀAd£ÉAiÀÄ ºÀAvÀ¢AzÀ ªÉÄïÉÃgÀĪÀ°è PÉÆAZÀ vÀqÀªÁVzÉAiÉÄAzɤ߸ÀÄvÀÛzÉ. EwÛÃZÉUÉ ¥ÀæPÀlUÉÆAqÀ ¥ËgÁtÂPÀ PÀÈwUÀ¼ÁzÀ
gÀÄPÁäAUÀzÀ CA¨É ±ÀÆ¥ÀðtSÁ ªÀÄvÀÄÛ
PÁ®£ÉÃ«Ä PÁzÀA§jUÀ¼À°è PÀ¯ÁvÀäPÀvÉ gÀÆ¥ÀPÀvÉ ªÀÄvÀÄÛ ¸ÁAPÉÃwPÀvÉUÀ¼À
ªÀÄÆ®PÀ ¥ÀÄgÁtzÀ ¥ÁvÀæUÀ¼À£ÀÄß ªÀvÀðªÀiÁ£ÀPÉÌ J¼ÉzÀÄ vÀgÀĪÀ ¥ÀæAiÀÄvÀßUÀ¼À£ÀÄß
PÀAqÁUÀ, CªÀgÀ §gÀºÀ ºÉƸÀ DAiÀiÁªÀĪÀ£ÀÄß ¥ÀqÉAiÀÄĪÀ J®è
¸ÁzsÀåvÉUÀ¼À£ÀÄß JwÛ vÉÆÃj¸ÀÄwÛzÉ. ±ÀÆ¥ÀðtSÉAiÀÄ ¸ÀéUÀvÀ gÀÆ¥ÀzÀ PÁzÀA§jAiÀÄAvÀÆ ¹Ûçà ±ÉÆÃµÀuÉAiÀÄ «gÀÄzÀÞ ¥ÀÄgÀĵÀ
¥Àæ¨sÀÄvÀéPÉÌ ¸ÀªÀÄxÀð ¸ÀªÁ®£ÉÆßqÀÄØªÀ
ºÉuÉÆÚêÀð¼À ªÀĺÁ ºÉÆÃgÁlzÀ
PÀxÀ£ÀªÁV gÀÆ¥ÀÄUÉÆArzÉ. ¸ÀgÀ¼À ¸ÀÄAzÀgÀ
¨sÁµÉ WÀl£É¬ÄAzÀ WÀl£ÉUÉ ¸ÁUÀĪÀ
ZÁPÀZÀPÀåvÉCxÀð¥ÀÆtð ¸ÀA¨sÁµÀuÉ
£ÁlQÃAiÀÄ ªÁvÁªÀgÀt ¸À馅 UÀ½AzÀ
CªÀgÀ ¥ËgÁtÂPÀ PÁzÀA§jUÀ¼ÀÄ D¸ÀQÛ
PÉgÀ½¸ÀÄvÀÛªÉ.
ಶಿಕ್ಷಕ ವೃತ್ತಿ, ಸಾಮಾಜಿಕ ಸಾಂಸ್ಕೃತಿಕ
ಸಂಘಟನೆಗಳ ನಡುವೆಯೂ, ಅವರು ೭೦ ಕಾದಂಬರಿ, ೯ ಕಥಾಸಂಕಲನ, ೯ ಯಕ್ಷಗಾನ ಕೃತಿಗಳು, ಸೇರಿ,
ನೂರಕ್ಕೂ ಮಿಕ್ಕಿ ವೈವಿಧ್ಯಮಯ ಕೃತಿಗಳನ್ನು
ಸಹೃದಯರಿಗೆ ನೀಡಿದ್ದಾರೆ. ಪ್ರವಾಸ ಕಥನದಲ್ಲಿ
ಅಮೇರಿಕಾವನ್ನೇ ಇಲ್ಲಿ ತಂದಿದ್ದಾರೆ. ಇಷ್ಟು ಅಗಾಧವಾದ
ಕೃತಿಸೃಷ್ಟಿಸಿದ ಲೇಖಕರು ಕನ್ನಡದಲ್ಲಿ ಅಪರೂಪ.
MnÖ£À°è F ªÀgÉV£À ¸ÀħâgÁAiÀÄgÀ
¢ÃWÀðPÁ®zÀ CPÀëgÀPÀȶ ªÀÄvÁåªÀÅzÉÆÃ G£ÀßvÀ PÀÈwAiÀÄ gÀZÀ£ÉAiÀÄ
vÁ°ÃªÉÄÃ£ÉÆÃ J¤ß¸ÀÄwÛzÉ. CªÀgÀ CzsÀåAiÀÄ£À
vÁwéPÀ C£ÉéõÀuÉ fêÀ£ÀzÀ
¥Àj¥ÀPÀé DAiÀiÁªÀÄ UÀ¼À£Éß®è zÀȶֹzÁUÀ
E£ÀÆß ªÀi˰PÀ PÀÈwUÀ¼À gÀZÀ£É
DVAiÉÄà DUÀÄvÀÛzÉ JA§ §gÀªÀ¸É vÀ¤ßAvÁ£É
ªÀÄÆqÀÄvÀÛzÉ.
ಆದರೆ ಖೇದದ ಸಂಗತಿಯೆಂದರೆ, ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನಾಧ್ಯಕ್ಷರಾಗುವ ಎಲ್ಲ ಅರ್ಹತೆ, ಸಾಧನೆ ಕೊಡುಗೆಗಳಿದ್ದರೂ, ಕೇಂದ್ರ ಪರಿಷತ್ತಾಗಲೀ, ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಾಗಲೀ ಈ ವರೆಗೂ ಸರ್ವಾಧ್ಯಕ್ಷರನ್ನಾಗಿಸುವ ಗುರುತಿಸಿ ಗೌರವಿಸುವ ಮನಸ್ಸು ಮಾಡದಿರುವುದು ವಿಷಾದನೀಯ. ಯಾವುದೇ ಲಾಬಿ ಓಲೈಕೆಯ ಪ್ರವೃತ್ತಿಯಿಲ್ಲದ, ಸ್ವಾಭಿಮಾನದ ಸುಬ್ಬರಾಯರ ಗುಣಗಳೇ ಇದಕ್ಕೆ ಕಾರಣವೆನ್ನಬಹುದಾಗಿದೆ. ಇಂತಹ ಸಾಧಕರ ಆಯ್ಕೆಯಿಂದ ಪರಿಷತ್ತಿನ ಗೌರವ ಹೆಚ್ಚುತ್ತಿತ್ತೇ ಹೊರತು, ಸಾಧಕರಿಗೆ ಯಾವ ನಷ್ಟವಿಲ್ಲ.
ಎಂಭತ್ತರ F ±ÀĨsÀ ¸ÀAzÀ¨sÀðzÀ°è ºÁ¢ðPÀ ±ÀĨsÁ±ÀAiÀÄUÀ¼À£ÀÄß C¦ð¸ÀÄwÛzÉÝãÉ.
C¥Ààl ªÀiˤ ನ್ಯಾಯ ¤µÀÄ×ರ. QæAiÀiÁ²Ã® ದೈತ್ಯಾಕ್ಷರ.À
¸ÀÄqÀĪÀ £ÉÆÃªÀ®Æè ¤gÀAvÀgÀ ¸ÀȶÖ. ¹rAiÀÄĪÀ £ÀÄrAiÀiÁ¼ÀzÀ®Æè
D¥ÀÛ C£ÀĨsÁªÀzÀ ªÀȶÖ.
PÁé°n ? PÁ®PÉÌ ©qÉÆÃt, PÁéAnn ? PÀ£ÀßqÀzÀ¯Éèಷ್ಟಿದ್ದಾರೆ ?
JAzÀÄ PÉüÀĪÀ zÁµÀÖöåð.
«¸ÁÛgÀ C¥ÀgÀA¥ÁgÀ. D¼ÀªÉÇà D§UÉUÉ PÉüÀ¨ÉÃqÀ.
£É® §zÀ¯ÁzÀgÉãÀÄ £É¯É §zÀ¯ÁUÀ°®è.
ªÀÄ£À C®ÄUÀ°®è.
ಅದು ಕಟ್ಟುನಿಟ್ಟು. PÀ®UÀ®Äè.
£ÀÆgÁgÀÄ ªÀµÀðzÀ D¼À ¨ÉÃgÀÄ.
aUÀÄgÀÄ ¥À®è«¹zÉ J¯Éè®Æè.
C¤ªÁAiÀÄð ¸ÀܼÁAvÀgÀ
f¯ÁèAvÀgÀ.
§AiÀĹ
¹éÃPÀj¹zÀÄÝ RAqÁAvÀgÀ. ¸ÀÈf¹zÀÄÝ C¥ÁgÀ, ಸಿಹಿ ¸ÁUÀgÀ.
==================================================
ಸುಮನಾಂಬರ – ೨೫.
ʻʻ ಕನ್ನಡದ
ಅನರ್ಘ್ಯ ರತ್ನ, ದೇವುಡು.ʼʼ
ಬಾಲನಂತ ದೇವುಡು, ಉನ್ಮತ್ತನಂಥ ದೇವುಡು, |
ಜಡಪಿಶಾಚಿ ದೇವುಡು, ಹುಚ್ಚು ಮರುಳು ದೇವುಡು ||
ಜೀವನವೇ ನಾಟಕ, ತಾನೂ ಒಬ್ಬ ನೋಟಕ |
ಆಟವೋ ಬೂಟಾಟವೋ , ನೋಟವೆಂದ ದೇವುಡು || ( ದ, ರಾ ಬೇಂದ್ರೆ )
೧೯೪೦ ರ ವರ್ಷ್.
ಉಡುಪಿಯ ಶ್ರೀ ಕೃಷ್ಣಮಠದ ಸಭಾಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ,
ಕರ್ನಾಟಕದ ಸುಪ್ರಸಿದ್ಧ ಭಾಷಣಕಾರರೊಬ್ಬರ ವಾಗ್ವೈಭವವನ್ನು
ಕೇಳಲು ಕಾತರರಾಗಿ ಕುಳಿತ, ಕೇಳುಗರ
ನಡುವೆ, ಅಜಾನುಬಾಹು, ಗೌರವರ್ಣದ ನಿಲುವಂಗಿ ಪಂಚೆಯ ಸರಳ
ಉಡುಗೆಯ ಸ್ಪುರದ್ರೂಪಿ ವ್ಯಕ್ತಿಯೊಬ್ಬರು ಶ್ರೀಮದ್ಗಾಂಭೀರ್ಯದಲ್ಲಿ ವೇದಿಕೆಯನ್ನೇರುತ್ತಾರೆ. ಅಷ್ಟಮಠದ
ಯತಿಗಳ ನಡುವೆ ಇನ್ನೇನು
ಆಸೀನರಾಗಬೇಕು ಎನ್ನುವಾಗಲೇ ಅವರ ಬಳಿಗೆ
ಟೆಲಿಗ್ರಾಮ್ ಒಂದು ಬರುತ್ತದೆ.
ಬಿಚ್ಚಿ ಓದುತ್ತಾರೆ. ಅವರ ಮುಖದಲ್ಲಿ
ಒಂದು ಆತಂಕ ಸುಳಿದು ಶಾಂತವಾಗುತ್ತದೆ.
ಕೆಲವೇ ಕ್ಷಣದಲ್ಲಿ ಶ್ರೀಯುತರ ಕಂಚಿನ ಕಂಠದ
ಮಂದ್ರಸ್ವರದ ಗಂಭೀರ ಧ್ವನಿ ಮೊಳಗತೊಡಗಿತು.
ಅಂದಿನ ಅವರ ಉಪನ್ಯಾಸದ
ವಿಷಯ ʻʻಸ್ಥಿತ
ಪ್ರಜ್ಞತೆ ʼʼ ಎಂಬುದಾಗಿತ್ತು. ಒಂದೂವರೆ ಘಂಟೆಯ
ಕಾಲ ನಿರರ್ಗಳ ವಾಗ್ಜರಿ
ಮನೋವಿಜ್ಞಾನದ ಪಾತಳಿಯಲ್ಲಿ, ಮಾನವ ಬದುಕಿನ ನೋವು ತಲ್ಲಣ,
ಏರು ಇಳಿವು, ಬದುಕಿನ ಸಾರ್ಥಕತೆ,
ಮನುಷ್ಯಸಂಬಂಧಗಳ ಆಳ ವಿಶ್ಲೇಷಣೆಯೊಂದಿಗೆ, ಭಗವದ್ಗೀತೆಯ
ಸಂದೇಶವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ
ಅವರ ನುಡಿಗಳು, ಕಿಕ್ಕಿರಿದ ಇಡೀ ಸಭೆಯನ್ನು ಮಂತ್ರಮುಗ್ಧವಾಗಿಸಿತು. ಅವರ ಉಪನ್ಯಾಸ ಒಂದು ದಾಖಲೆಯನ್ನೇ ಸೃಷ್ಟಿಸಿತು.
ಐದಾರು ನಿಮಿಷ ಕರತಾಡನ ಮೊಳಗಿತು.
ಇನ್ನೂ ಎರಡು ಮೂರುದಿನ
ಅವರ ಉಪನ್ಯಾಸ ನಿಗದಿಯಾಗಿತ್ತು. ಆದರೆ ಅವರು
ಸಂಘಟಕರೊಂದಿಗೆ, ತನಗೆ ಈಗಿಂದೀಗ ಬೆಂಗಳೂರಿಗೆ
ಪ್ರಯಾಣಿಸಬೇಕಿದೆ. ವಾಹನವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚಿದರು. ಏಕೆ ಅಷ್ಟು
ಆತುರ ಎಂದು ಪ್ರಶ್ನಿಸಿದಾಗ,
ಅವರಿಂದ ಬಂದ ಉತ್ತರ ಸಂಘಟಕರನ್ನು ದಂಗುಬಡಿಸಿತ್ತು. ಎಂಜಿನಿಯರ್
ಆಗಿ ಅದೇ ಆಗ ಉದ್ಯೋಗ
ಪ್ರಾರಂಭಿಸಿದ್ದ ಓರ್ವ ಮಗ, ವಾಹನ ಅಪಘಾತದಲ್ಲಿ ಮರಣಹೊಂದಿದ್ದ.
ಆದರೂ ಅದು ಹೇಗೆ
ಇಷ್ಟು ಸುಂದರವಾದ ಅದೆಷ್ಟು ಆಳವಾದ ಉಪನ್ಯಾಸ
ಮಾಡಿದಿರಿ..? ಎಂದು ಕೇಳಿದಾಗ,
ʻʻಗೀತೆಯ ಸ್ಥಿತಪ್ರಜ್ಞತೆಯ ಸಂದೇಶವನ್ನು
ನಾನೆಷ್ಟು ಅನುಸಂಧಾನಿಸಿಕೊಂಡಿದ್ದೇನೆ ಎಂಬುದರ ಪರೀಕ್ಷೆ
ಇಂದು ನನಗೆದುರಾಯಿತು. ನಮ್ಮ ಜ್ಞಾನ
ಕೇವಲ ಬೌದ್ಧಿಕವಾದರೆ ಸಾಲದು.
ಪ್ರಜ್ಞೆಯ ಆಳದಲ್ಲಿ ನೆಲೆಸಿರಬೇಕು.
ಆ ಸವಾಲನ್ನು ನಾನು ಇಂದು
ಎದುರಿಸಿದ್ದೇನೆ. ನನಗೆ ನಾನೇ ಸ್ಥಿತಪ್ರಜ್ಞತೆಯನ್ನು ಬೋಧಿಸಿಕೊಂಡೆ.ʼʼ ಎಂದು ಉತ್ತರಿಸುತ್ತ, ವೇದಿಕೆಯನ್ನಿಳಿದರು.
ತಮ್ಮ ಹೆಸರಿನ ಹಿಂದೆ ʻʻ
ದೇವುಡುʼʼ( ಕನ್ನಡದಲ್ಲಿ ದೇವರು ) ಎಂಬ ಉಪನಾಮ ಹೊಂದಿದ್ದ, ದೇವುಡು
ನರಸಿಂಹ ಶಾಸ್ತ್ರಿಯವರೇ ( ೧೮೮೬ – ೧೯೬೨) ಅಂದಿನ
ಉಪನ್ಯಾಸಕರು.
ಕನ್ನಡ ಸಾಹಿತ್ಯದ
ಅನರ್ಘ್ಯ ರತ್ನಗಳಲ್ಲಿ ಒಬ್ಬರಾದ ದೇವುಡು ರವರನ್ನು ನೆನಪಿಸಿಕೊಂಡಾಗಲೆಲ್ಲ, ಮಹಾಬ್ರಾಹ್ಮಣ, ಮಹಾಕ್ಷತ್ರಿಯ,
ಮಹಾದರ್ಶನ, ಎಂಬ ಅಪೂರ್ವ ಮೂರು ಕೃತಿಗಳು ಕಣ್ಣೆದುರು
ಬೆಳಗುತ್ತವೆ. ವೇದ ಉಪನಿಷತ್ತುಗಳ
ವಿಶಾಲ ಅಧ್ಯಯನದಿಂದ ರೂಪುಗೊಂಡ,
ವೇದಕಾಲದ ಜನಜೀವನವನ್ನು ಪುನಃಸೃಷ್ಟಿಸಿದ, ಭಾರತೀಯ
ಕಾದಂಬರಿ ಧಾರೆಗೆ ತಮ್ಮದೇ ಆದ ಹೊಸ ಅನುಭವ
ಪ್ರಪಂಚವನ್ನು ಸೃಷ್ಟಿಸಿಕೊಟ್ಟ, ದೇವುಡು, ಕನ್ನಡ ಅಕ್ಷರ
ಲೋಕದಲ್ಲಿ ಶಾಶ್ವತ ಸ್ಥಾನವನ್ನು
ಪಡೆದುಕೊಂಡಿದ್ದಾರೆ.
ಪಾಶ್ಚಾತ್ಯ ಪೌರಾತ್ಯ
ಜ್ಞಾನಶಿಸ್ತಿನಿಂದ ಸಮೃದ್ಧಗೊಂಡಿದ್ದ ಅವರ ಪ್ರತಿಭಾ ಸಾಮರ್ಥ್ಯ
ಸಾವಿರ ಸಾವಿರ ಪುಟಗಳಲ್ಲಿ ದಾಖಲಾಗಿವೆ.
ಶಿಕ್ಷಕರಾಗಿ, ಸರಕಾರಿ ಅಧಿಕಾರಿಗಳಾಗಿ, ಸಂಶೋಧಕರಾಗಿ,
ಚಲನಚಿತ್ರ ಸಾಹಿತಿಗಳಾಗಿ, ನಾಟಕ ಕಲಾವಿದ, ಸಾಹಿತಿ,
ರಂಗ ನಿರ್ದೇಶಕರಾಗಿ,ಚಲನಚಿತ್ರ ನಟರಾಗಿ,
ಅವರು ಕಾರ್ಯನಿರ್ವಹಿಸಿದ ಬಗೆಗಳನ್ನು
ಕಂಡಾಗ, ಮೈ ನವಿರೇಳುತ್ತದೆ. ಒಂದೇ ಒಂದು ವ್ಯಕ್ತಿತ್ವದಲ್ಲಿ ಅದೆಷ್ಟು ವೈವಿಧ್ಯ. ಅದೆಷ್ಟು ವಿಸ್ತಾರ. !!
ಅವರು ರಚಿಸಿದ
ಹಲವು ಕೃತಿಗಳು ಈಗಲೂ ಪುನರ್ಮುದ್ರಣ
ಗೊಳ್ಳುತ್ತಲೇ ಇವೆ. ಜನಪ್ರಿಯತೆ ಇನ್ನೂ ಉಜ್ವಲವಾಗಿಯೇ ಇದೆ.
ಕನ್ನಡ ಸಾಹಿತ್ಯ
ಸದ್ಯ ಯಾವ ಚಳುವಳಿ, ಯಾವ ಸಂಚಲನವಿಲ್ಲದೇ
ಜಡವಾಗುತ್ತಿದೆ ಎಂದೆನ್ನಿಸುತ್ತಿರುವಾಗ,
ಮತ್ತೆ ನಾವು ನಮ್ಮ ಮೂಲಕ್ಕೆ
ಮರಳುವುದು ಅನಿವಾರ್ಯವೇನೋ ಎಂದೆನ್ನಿಸುತ್ತಿದೆ. ಪಂಪನಿಂದ
ಕುವೆಂಪುವರೆಗಿನ ಭಾಷೆ ಮತ್ತು ವೈಚಾರಿಕ ಸಾಧನೆಗಳ ಮರು ಅನುಸಂಧಾನ
ಮಾತ್ರ ಕನ್ನಡಕ್ಕೊಂದು ಹೊಸಜೀವ ತಂದುಕೊಡಲು
ಸಾಧ್ಯ. ಪರಂಪರೆಯ ಪ್ರಜ್ಞೆಯಿಲ್ಲದ, ಕೇವಲ ವರ್ತಮಾನದ
ಅನುಭವ ಕ್ಲೀಷೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಭಾಷೆ ಅನುಭವಗಳು ಸೋಲತೊಡಗಿದ
ಕ್ಷಣದಲ್ಲೇ ಮತ್ತೆ ಜಾನಪದದ
ಮಡಿಲಿಗೆ ಶರಣಾಗುತ್ತಿರುವುದು, ಒಳ್ಳೆಯ ಬೆಳವಣಿಗೆ.
ಪರಿಸರ, ಸಾಮುದಾಯಿಕ ಸಂಸ್ಕೃತಿ, ಇತಿಹಾಸ
ಮತ್ತು ಆಡುಭಾಷೆಗಳ ಕೃತಿಗಳು ಮತ್ತೆ ನಮ್ಮನ್ನು
ಜಾಗ್ರತಗೊಳಿಸುತ್ತಿವೆ.
ಕೀಳರಿಮೆಯಲ್ಲಿ
ಬಳಲುತ್ತಿದ್ದ ಕನ್ನಡಭಾಷೆಗೊಂದು ಆತ್ಮವಿಶ್ವಾಸ, ಆತ್ಮಸ್ಥೈರ್ಯವೊದಗಿಸುವ ಅದ್ಭುತ
ಕನ್ನಡ ಕೈಂಕರ್ಯವನ್ನು ಬದುಕಿಡೀ ಮುನ್ನಡೆಸಿದ
ದೇವುಡು ರಂಥ ಹಿರಿಯರ ಸಾಧನೆ ಅನನ್ಯ- ಅಸಾಧಾರಣ. ಕೇವಲ ಕಥೆ ಕಾದಂಬರಿಕಾರರಾಗಿ ಕೃತಿ ರಚಿಸುತ್ತಿದ್ದರೂ ಸಾಕಿತ್ತು.
ಆದರೆ ಅವರ ವ್ಯಕ್ತಿತ್ವದ
ವೈಶಿಷ್ಟ್ಯಪೂರ್ಣ ಆಯಾಮಗಳು, ಅಲ್ಲಿಗೇ ನಿಲ್ಲದೇ
ತಾತ್ವಿಕ ಚಿಂತನೆಯಲ್ಲಿ ತೊಡಗಿಕೊಂಡಿತು. ಕನ್ನಡದಲ್ಲಿ ಇಲ್ಲದಿದ್ದ, ವಿಮರ್ಶೆ, ಮಕ್ಕಳ ಸಾಹಿತ್ಯ,
ಪ್ರಬಂಧ ಪ್ರಕಾರ, ಸಾಂಸ್ಕೃತಿಕ ಸಂಶೋಧನೆ, ನಾಟಕ,
ಮತ್ತು ಕಾದಂಬರಿ ಪ್ರಕಾರಗಳಿಗೆ, ಇಪ್ಪತ್ತನೆಯ
ಶತಕದ ಪ್ರಾರಂಭದ ಅವಧಿಯಲ್ಲಿ, ಒಬ್ಬೊಬ್ಬರೂ ಪ್ರತಿಯೊಂದು
ವಿಭಾಗದಲ್ಲೂ ಅದ್ಭುತ ಸಾಧನೆ ಗೈದು, ಕನ್ನಡವನ್ನು ಜಾಗತಿಕ ಮಟ್ಟಕ್ಕೇರಿಸಿದ್ದು ಇದೀಗ ಇತಿಹಾಸ. ಅಂತಹ ಸಾಧಕರಲ್ಲಿ ದೇವುಡು ಶಾಸ್ತ್ರಿಗಳೂ ಪ್ರಮುಖರು.
ಜೀವನದ ಗಾಢ ಸತ್ಯಗಳು, ಧರ್ಮ ನೀತಿ ವಿಚಾರಗಳು ಮಾನವ ಸ್ವಭಾವದ
ಸೂಕ್ಷ್ಮತೆಗಳು ಮತ್ತು ಆತ್ಮಜಿಜ್ಞಾಸೆಯ ಮೌಲ್ಯಗಳು ಅವರ ಕೃತಿಗಳಲ್ಲಿ ಗಾಢವಾಗಿ ಚಿತ್ರಣಗೊಂಡಿವೆ.
ಕ್ಷತ್ರಿಯನಾದ ಕೌಶಿಕ ಮಹಾರಾಜ
ತನ್ನ ಸಾಧನೆಯಿಂದ ಮಹಾಬ್ರಾಹ್ಮಣ ವಿಶ್ವಾಮಿತ್ರನಾಗಿ ರೂಪುಗೊಂಡ
ಕಥೆ ʻʻ ಮಹಾಬ್ರಾಹ್ಮಣʼʼ
( ೧೯೫೦) ಕೃತಿಯಲ್ಲಿದ್ದರೆ, ಯಾಜ್ಞವಲ್ಕ್ಯ ನ ಸಿದ್ಧಿ
ಸಾಧನೆಗಳ ರೋಚಕ ವಿವರಗಳು, ʻʻ ಮಹಾದರ್ಶನʼʼ(೧೯೬೦)
ಕಾದಂಬರಿಯಲ್ಲಿ ಚಿತ್ರಣಗೊಂಡಿದೆ. ಮಹಾಕ್ಷತ್ರಿಯ ಕಾದಂಬರಿಯಲ್ಲಿ, ( ೧೯೬೨) ನಹುಷ ಚಕ್ರವರ್ತಿಯ ವೃತ್ತಾಂತ ಬಿಚ್ಚಿಕೊಳ್ಳುತ್ತದೆ. ಮೂರೂ ಮಹಾಕೃತಿಗಳು, ವೇದಕಾಲದ
ಸಂಸ್ಕೃತಿ ಜನಜೀವನ ಮತ್ತು ಜನಾಂಗೀಯ
ಸಮನ್ವಯವನ್ನು ದಾಖಲಿಸುತ್ತ, ವಾಸ್ತವದ
ಸಾಮಾಜಿಕ ದೌರ್ಬಲ್ಯದೆಡೆಗೆ ಕ್ಷ ಕಿರಣ ಬೀರುತ್ತವೆ.
ಅವರ ಕಾದಂಬರಿಗಳಲ್ಲಿ
“ಧರ್ಮ” ಎಂಬುದು
ಕೇವಲ ಆಚರಣೆಗಳಲ್ಲ;
ಅದು ಮಾನವನ
ಅಂತರಂಗದ ಶುದ್ಧತೆಯ
ರೂಪ. ಸತ್ಯ,
ತ್ಯಾಗ, ಕರುಣೆ,
ಕ್ಷಮೆ ಇವುಗಳೇ
ನಿಜವಾದ ಧರ್ಮವೆಂದು
ಅವರು ಸಾರುತ್ತಾರೆ.
ಧರ್ಮ ಮತ್ತು
ಮಾನವೀಯತೆ ಒಂದೇ
ನಾಣ್ಯದ ಎರಡು
ಮುಖಗಳೆಂಬ ದೃಷ್ಟಿಕೋನ
ಅವರ
ಸಮಗ್ರ ಸಾಹಿತ್ಯದಲ್ಲಿ ಗೋಚರಿಸುತ್ತದೆ.
ದೇವುಡು ಕೇವಲ ಪೌರಾಣಿಕ
ಆಧ್ಯಾತ್ಮಿಕ ಕೃತಿಕಾರರಲ್ಲ, ಪತ್ರಕರ್ತರಾಗಿ, ನವಜೀವನ ಪತ್ರಿಕೆಯನ್ನು ಪ್ರಾರಂಭಿಸಿ, ತಮ್ಮ ಕಾಲದ ರಾಜಕೀಯ,
ಸಂಸ್ಕೃತಿ , ಕಲೆ ಕ್ರೀಡೆಗಳಿಗೆ ಒತ್ತು ನೀಡಿದರೆ, ಮಕ್ಕಳ
ಸಾಹಿತ್ಯದ ಕೊರತೆಯನ್ನು ಅನುಲಕ್ಷಿಸಿ,
ಮಕ್ಕಳ ಮನೋಜಗತ್ತನ್ನು ಅರಳಿಸುವ ಉದ್ದೇಶದಲ್ಲೇ
ಎರಡು ದಶಕಗಳ ಕಾಲ ʻʻ ನಮ್ಮ
ಪುಸ್ತಕ ʼʼ ಎಂಬ ಪತ್ರಿಕೆಯನ್ನು
ಯಶಸ್ವೀಯಾಗಿ ಪ್ರಕಟಿಸುತ್ತಾರೆ. ರಂಗಭೂಮಿಗೇ
ಮೀಸಲಾದ ಪತ್ರಿಕೆಗೆ ಜನ್ಮನೀಡುತ್ತಾರೆ. ಮಕ್ಕಳ ಮನೋಲೋಕವನ್ನು ದೃಷ್ಟಿಯಲ್ಲಿಟ್ಟು ೧೬ ಕೃತಿಯನ್ನು ನೀಡುತ್ತಾರೆ.
ಆ ಕಾಲದ ಮುಖ್ಯಮಂತ್ರಿಯಾಗಿದ್ದ (
೧೯೫೩) ಕೆಂಗಲ್ ಹನುಮಂತಯ್ಯನವರ ಮನವೊಲಿಸಿ,
ಕನ್ನಡ ಸಂಸ್ಕೃತಿ ಇಲಾಖೆಯನ್ನು ಪ್ರಾರಂಭಿಸುತ್ತಾರೆ. ಕ.ಸಾಹಿತ್ಯ ಪರಿಷತ್ತಿನ ಕಾರ್ಯಕಾರೀ
ಮಂಡಳಿಯ ಸದಸ್ಯರಾಗಿ, ಪರಿಷತ್ತಿಗೆ
ವೇಗನೀಡುತ್ತಾರೆ.
ಅವರು ರಚಿಸಿದ ʻʻ
ಮಯೂರʼʼ ಕಾದಂಬರಿ ಮುಂದೆ
ಚಲನಚಿತ್ರವಾಗಿ ಯಶ ಪಡೆದಿದ್ದನ್ನು
ಸ್ಮರಿಸಬಹುದಾಗಿದೆ. ಕನ್ನಡದ ಪ್ರಪ್ರಥಮ
ಚಕ್ರವರ್ತಿಯಾದ ಮಯೂರ ಮಹಾರಾಜನ
ಮೂಲಕ ಕನ್ನಡ ಅಸ್ಮಿತೆಯನ್ನು ಉಜ್ವಲಗೊಳಿಸುವಲ್ಲಿ, ಅವರ ಪಾತ್ರ ಬಹು
ಹಿರಿದಾಗಿದೆ. ಕಾಮ ಪ್ರೇಮಗಳ
ದ್ವಂದ್ವಗಳನ್ನು ಚಿತ್ರಿಸುವ ಅಂತರಂಗ
ಎಂಬ ಕಾದಂಬರಿ, ಕನ್ನಡದ
ಮೊಟ್ಟಮೊದಲ ಮನೋ ವಿಶ್ಲೇಷಣಾತ್ಮಕ
ಕೃತಿಯೆಂದು ಪ್ರಸಿದ್ಧವಾಗಿದೆ.
೧೪ ಕಾದಂಬರಿ, ೨೬ ಕಥಾಸಂಕಲನ, ೯ ಪ್ರಾಚೀನ
ಕಾವ್ಯಾನುವಾದ, ೬ ನಾಟಕ, ೧೮ ವೈಚಾರಿಕ ವಾದ ಇತರ ಕೃತಿಗಳೆಲ್ಲ ಸೇರಿ
೮೦ ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ
ಪ್ರಪಂಚಕ್ಕೆ ನೀಡಿದ್ದಾರೆ.
ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ರವರ
ಪಟ್ಟಶಿಷ್ಯರಾಗಿದ್ದ ದೇವುಡು ರವರ
ಸಾಹಿತ್ಯಸಾಧನೆಯನ್ನು
ರಾಧಾಕೃಷ್ಣರೇ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ತಾತ್ವಿಕ ಗ್ರಂಥವಾದ ಸಂಸ್ಕೃತದ ಯೋಗವಾಸಿಷ್ಠ
ಕೃತಿಯನ್ನು ೨೧ ಭಾಗಗಳಲ್ಲಿ ಕನ್ನಡಕ್ಕೆ ಅನುವಾದಿಸಿದ ದೇವುಡುರವರ
ಈ ಸಾಧನೆ ಕನ್ನಡಕ್ಕೊಂದು
ಅಪರೂಪದ ಕೊಡುಗೆ. ೧೯೫೨ ರಲ್ಲಿ
ದೇವುಡು ರವರ ಸಾಹಿತ್ಯಸಾಧನೆಗೆ ರಾಷ್ಟ್ರಪತಿ ಪದಕ, ಡಾ. ರಾಜೇಂದ್ರ ಪ್ರಸಾದರ ಮೂಲಕ
ದೊರೆತಿದ್ದು, ಅವರ ಸಾಧನೆಗೆ
ಮತ್ತೊಂದು ಗರಿ ಮೂಡಿದಂತಾಗಿತ್ತು.
ದೇವುಡು ರವರ
ಪಾತ್ರಗಳು ಅದು ಪೌರಾಣಿಕ,
ಐತಿಹಾಸಿಕ, ಅಥವಾ ಸಾಮಾಜಿಕ ನೆಲೆಯಲ್ಲಿರಲಿ, ಸಾಮಾನ್ಯವಾಗಿ
ನೈತಿಕ ಸಂಘರ್ಷಗಳನ್ನು
ಅನುಭವಿಸುತ್ತವೆ. ಸತ್ಯ–ಅಸತ್ಯ,
ಧರ್ಮ–ಅಧರ್ಮಗಳ
ನಡುವಿನ ಹೋರಾಟವು
ತಾತ್ವಿಕ ಚಿಂತನೆಗೆ
ದಾರಿ ಮಾಡಿಕೊಡುತ್ತದೆ.
ಈ ಸಂಘರ್ಷಗಳ
ಮೂಲಕ ಜೀವನದ
ಸೂಕ್ಷ್ಮ ಸತ್ಯಗಳನ್ನು
ಅವರು ತೆರೆದಿಡುತ್ತಾರೆ.
ಪುರಾಣಪಾತ್ರಗಳನ್ನು ಅವರು
ಮಾನವೀಯ ದೃಷ್ಠಿಯಿಂದ
ವಿಶ್ಲೇಷಿಸಿದ್ದಾರೆ. ದೈವೀಕರಿಸಿದ
ಪಾತ್ರಗಳಲ್ಲಿಯೂ ಮಾನವೀಯ
ದೌರ್ಬಲ್ಯ–ಮಹತ್ವಗಳನ್ನು
ತೋರಿಸುವ ಮೂಲಕ
ಜೀವನದ ವಾಸ್ತವತೆಯನ್ನು
ಒತ್ತಿ ಹೇಳುತ್ತಾರೆ.
ಇದರಿಂದ ಅವರ
ಸಾಹಿತ್ಯಕ್ಕೆ ತಾತ್ವಿಕ
ಆಳ ದೊರಕಿದೆ. ಭಕ್ತಿ ಮತ್ತು ಆಧ್ಯಾತ್ಮಿಕತೆ,
ವೇದಾಂತ ಚಿಂತನೆಗಳ ಮೌಲ್ಯಗಳನ್ನು
ಆಧುನಿಕ ದೃಷ್ಟಿಯಲ್ಲಿ ಚಿತ್ರಿಸುತ್ತಾರೆ. ಮಾನವೀಯ ಮೌಲ್ಯಗಳ ಬಗೆಗಿನ ಅವರ
ಧ್ಯಾನ, ಪ್ರಸ್ತುತ ಕ್ರೂರ
ವರ್ತಮಾನಕ್ಕೆ ಹೊಸ ಪಾಠವಾಗಿ,
ಎಚ್ಚರಿಸುತ್ತದೆ.
ಅವರ ಸಾಹಿತ್ಯಸೃಷ್ಟಿ ಕೇವಲ
ರಂಜನೆಯ ಸರಕಾಗಿ ಸೃಷ್ಟಿಯಾಗಿಲ್ಲ. , ಸಾಹಿತ್ಯವು
ಕೇವಲ ಕಥಾನಕವಲ್ಲ;
ಅದು ಜೀವನದ
ತತ್ವಗಳನ್ನು ಅರಿಯುವ
ಆತ್ಮಯಾತ್ರೆ. ಭಾರತೀಯ
ಪರಂಪರೆ ಮತ್ತು
ಮಾನವೀಯ ಮೌಲ್ಯಗಳನ್ನು
ಸಂಯೋಜಿಸಿದ ಅವರ
ತಾತ್ವಿಕ ದೃಷ್ಟಿ ಕನ್ನಡ ಸಾಹಿತ್ಯಕ್ಕೆ
ಶಾಶ್ವತವಾದ ಕೊಡುಗೆಯಾಗಿದೆ.
ಸುಬ್ರಾಯ ಮತ್ತೀಹಳ್ಳಿ.
ತಾ- ೨೪ -೨- ೨೦೨೬
ಸುಮನಾಂಬರ, ಅಂಕಣ – ೨೬.
ಬುದ್ಧಿ ಭಾವ ಮತ್ತು ವರ್ತನೆ.
ಒಂದು ಕಾಲವಿತ್ತು.
ಕೃಷಿಕ ಅವಿಭಕ್ತ ಕುಟುಂಬ. ಮನೆತುಂಬಾ
ಜನವೋ ಜನ. ಎಲ್ಲೆಂದರಲ್ಲಿ ಚಿಳ್ಳೆಪಿಳ್ಳೆಗಳು. ಬಸುರಿ ಬಾಣಂತಿಯರು, ಮನೆಜನ,
ಬಂದ ಅತಿಥಿಗಳು, ಆಳು ಕಾಳುಗಳು, ಮನೆಯಿಡೀ ಗದ್ದಲವೋ ಗದ್ದಲ. ಗಂಡಸು
ವ್ಯವಹಾರಸ್ಥ. ಮಹಿಳೆ ಮಕ್ಕಳ ಲಾಲನೆ ಪಾಲನೆ,
ಊಟ ತಿಂಡಿಗಳ ಸರಬರಾಜು, ಕೃಷಿಕೆಲಸಗಳಲ್ಲಿ ನಿರತರು.
ಯಜಮಾನ ಸರ್ವಾಧಿಕಾರಿ.
ಮಕ್ಕಳೊಂದಿಗೆ ಸಲಿಗೆಯೇ ಇಲ್ಲ. ಜಗುಲಿಯಲ್ಲಿ ಯಜಮಾನನಿದ್ದರೆ ಮಕ್ಕಳೆಲ್ಲ ಒಳಗೆ. ಯಜಮಾನ ಒಳಗಿದ್ದರೆ ಮಕ್ಕಳೆಲ್ಲ
ಹೊರಗೆ. ಒಮ್ಮೊಮ್ಮೆ ತನ್ನ ಮಕ್ಕಳ
ಪರಿಚಯವೇ ಯಜಮಾನನಿಗೆ ಇರದ ಸ್ಥಿತಿ.
ಮಕ್ಕಳೊಂದಿಗೆ ಯಜಮಾನನ
ಸಂಬಂಧ ಎಂದರೆ, ತುಂಟತನಕ್ಕೆ ಬೈದಾಡುವುದು. ಕೊಂಚ ಹೆಚ್ಚಾದರೆ ಹೊಡೆದು ಪಾಠಕಲಿಸುವುದು. ಅವುಗಳು
ಅಳುತ್ತಾ ತಾಯಿ ಮಡಿಲು ಸೇರುವುದು. ಮಕ್ಕಳಿಗೆ
ಏನಾದರೂ ವಸ್ತುವಿನ ಅವಶ್ಯಕತೆಯಿದ್ದಾಗ, ನೇರ ತಂದೆಯೊಂದಿಗೆ ಮುಖಾ ಮುಖಿಯೇ
ಇಲ್ಲ. ತಾಯಿಯ ವಶೀಲಿ ಬೇಕೇ
ಬೇಕು. ಅವಳಿಗೂ ಸಲೀಸಾಗಿ
ಮಂಜೂರಿಯಿಲ್ಲ. ಅವಳೂ ಒಂದಿಷ್ಟು ದೂಷಣೆಯನ್ನೆದುರಿಸಬೇಕು.
ಒಟ್ಟಿನಲ್ಲಿ ಕುಟುಂಬದಲ್ಲಿ,
ತಂದೆ ಮಕ್ಕಳಪಾಲಿಗೆ ಖಳ ನಾಯಕ.
ಭಯ ಗೌರವ ದ ಮೊತ್ತ ಆತ. ಬಾಲ್ಯದಿಂದಲೇ ಒಂದಿಷ್ಟು ದೂರ . ಪ್ರೌಢರಾದಮೇಲೂ
ಈ ಮಾನಸಿಕ ದೂರದ ಮುಂದುವರಿಕೆ.
ಕಾಲ ಬದಲಾಯಿತು.
ಆಧುನಿಕ ತಂತ್ರಜ್ಞಾನದ ಕಾಲ ಸೃಷ್ಟಿಯಾಯಿತು. ಅವಿಭಕ್ತ
ಕುಟುಂಬಗಳೆಲ್ಲ ಛಿದ್ರವಾಯಿತು. ಅಣು ಕುಟುಂಬಗಳು, ಒಂದೋ ಎರಡೋ ಮಕ್ಕಳು
ಮಾತ್ರ. ಅವರ ಬಯಕೆಯನ್ನೀಡೇರಿಸುವಲ್ಲಿ, ತಂದೆ ನಿರತ.
ಮಕ್ಕಳೊಂದಿಗೆ ಸಮಾನವಾಗಿಯೇ ತಂದೆ ತಾಯಿಯರ
ಸಂಪರ್ಕ. ಪ್ರೀತಿಯ ಸುರಿಮಳೆ. ಮನೆಯಲ್ಲಿ ಸ್ಥಳವಿಲ್ಲದಷ್ಟು ಆಟಿಗೆ ಸಾಮಾನು. ಹಾಸಿ ಹೊದೆದು
ಬೀಸಾಡುವಷ್ಟು ಬಟ್ಟೆ ಬರೆ. ಕ್ಷಣ ಕ್ಷಣಕ್ಕೆ ಒದಗಿಸುವ ತಿಂಡಿ ತೀರ್ಥಗಳು.
ಮಗುವಿಗೆ ಸ್ಪರ್ಧಿಯೇ
ಇಲ್ಲ. ಮಗುವಿನದೇ ರಾಜ್ಯಭಾರ. ಅಜ್ಜ ಅಜ್ಜಿಯರಿಲ್ಲ. ಚಿಕ್ಕಪ್ಪ ದೊಡ್ಡಪ್ಪರಿಲ್ಲ. ಚಿಕ್ಕಮ್ಮ
ಅತ್ತೆಯರೂ ಇಲ್ಲ. ಅಸಂಖ್ಯ ಸಂಬಂಧಗಳ ಹೆಸರನ್ನ ಕೇಳದೇ
ಬೆಳೆಯುವ ಮಕ್ಕಳು. ಬೇಡಿಕೆ ಈಡೇರಿಸದಿದ್ದಲ್ಲಿ ಹಟ, ಚಂಡಿಗಳ
ಬಂಡೆಯಾಗುತ್ತಾರೆ. ಸೋಲು ಮಾತ್ರ ಪಾಲಕರದ್ದು.
ಪ್ರಾಯಕ್ಕೆ ಬರುವ
ಮೊದಲೇ ವಾಹನಕ್ಕೆ ಬೇಡಿಕೆ.
ಈಡೇರಿಸದಿದ್ದಲ್ಲಿ ಬೆದರಿಕೆಯ ಅಸ್ತ್ರ.
ಇಲ್ಲವೇ ಸಾಯುತ್ತೇನೆಂಬ ಧಮಕಿ. ಮತ್ತೆ ಶರಣಾಗುವವರು
ಪಾಲಕರು.
ಒಂದು ಕಾಲದಲ್ಲಿ ಪುರುಷಾಡಳಿತದ ಭಯಪೀಡಿತ ಕ್ಷಣದಲ್ಲೇ
ಮಕ್ಕಳು ಉಸಿರಾಡುತ್ತಿದ್ದರು. ಕನಿಷ್ಠ ಬೇಡಿಕೆಯೂ ಈಡೇರದ ಸ್ಥಿತಿಯಿತ್ತು. ಈ ಕಾಲ
ಬದಲಾಗಿದೆ. ಪೂರೈಸಿದಷ್ಟೂ ಬೇಡಿಕೆ
ಮುಗಿಯದ ಸ್ಥಿತಿ. ಅತಿ
ಅತಿ.
ಆ ಕಾಲದ ಹೆಚ್ಚಿನ ತಂದೆಗಳೆಲ್ಲ ಬುದ್ಧಿ ಪ್ರಧಾನರು. ಅಶಿಕ್ಷಿತರು. ಭಾವನೆಯ ಅಂಶಗಳನ್ನು
ಪುರುಷಾಹಂಕಾರ ತಡೆಯನ್ನೊಡ್ಡುತ್ತಿತ್ತು. ಮಕ್ಕಳನ್ನೋ
ಸ್ತ್ರೀಯರನ್ನೋ ಪ್ರಶಂಸಿದರೆ ತಾನೆಲ್ಲಿ
ಕ್ಷುಲ್ಲಕನಾಗಿಬಿಡುತ್ತೇನೆಯೋ ಎನ್ನುವಂತೇ ಅಂತರಂಗದ
ಪ್ರೀತಿಯನ್ನೂ ಹತ್ತಿಕ್ಕಿ ಕೃತಕ ಗಾಂಭೀರ್ಯದಲ್ಲಿ ವರ್ತಿಸುತ್ತ,
ಹುಸಿ ವ್ಯಕ್ತಿತ್ವದ ಮುದ್ದೆಯಾಗುತ್ತಿದ್ದ ಆಗಿನ ತಂದೆ. ಅದಕ್ಕೆ ಪ್ರತಿಯಾಗಿ ತಾಯಿ, ಮಕ್ಕಳನ್ನು ಅವರ ಎಲ್ಲ
ದೌರ್ಬಲ್ಯಗಳನ್ನೆಲ್ಲ ಶಿಕ್ಷಿಸಿದೇ ಮುದ್ದಿಸುತ್ತ,
ಕೇವಲ ಪ್ರೀತಿಯೊಂದನ್ನೇ ಹಂಚುತ್ತಿದ್ದ
ಅವಳ ವರ್ತನೆಯೂ ಮಕ್ಕಳ ಸಮತೋಲ ಮಾನಸಿಕ
ಬೆಳವಣಿಗೆಗೆ ಅಡ್ಡಿಯಾಗಿಬಿಡುತ್ತಿತ್ತು.
ಮನುಷ್ಯನ ವರ್ತನೆಯ
ಹಿನ್ನೆಲೆಯಲ್ಲಿ, ಬುದ್ಧಿ ಭಾವಗಳ ಪಾಲು ಅತ್ಯಂತ
ಪ್ರಮುಖವಾಗಿದೆ. ಯಾವುದೇ ಅತಿಯಾದರೂ
ಅಪಾಯ ಕಟ್ಟಿಟ್ಟ ಬುತ್ತಿ.
ಸಂಘಜೀವಿ ಮನುಷ್ಯನ
ಮೂಲಭೂತ ಪ್ರವೃತ್ತಿಯಲ್ಲಿ, ಭಾವ ಎಂಬ
ಶಕ್ತಿ, ಅನುಭವ ಮತ್ತು ಅನುಭೂತಿಗೆ ಸಂಬಂಧಿಸಿದರೆ, ಬುದ್ಧಿ ವೈಚಾರಿಕತೆಯನ್ನು ಪೋಷಿಸುತ್ತದೆ.
ವರ್ತನೆ ಯೆಂಬುದು ಬುದ್ಧಿ ಭಾವಗಳ ಸೂಕ್ತ ಆಚರಣೆಯನ್ನು ಅಪೇಕ್ಷಿಸುತ್ತದೆ. ಇವು ಪರಸ್ಪರ
ಸಂಬಂಧ ವೇರ್ಪಡಿಸಿಕೊಂಡು, ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಮನುಷ್ಯ ಸಂಬಂಧದ
ಸರಪಣಿಯನ್ನು ಸೃಷ್ಟಿಸುತ್ತದೆ. ಏರು ಪೇರಾದರೆ
ಸಂಬಂಧದ ಗಾಢತೆಯನ್ನು ಕುಗ್ಗಿಸುತ್ತದೆ.
ಮನಸ್ಸು ಬುದ್ಧಿ ಎಂಬ
ಶಕ್ತಿ ಸಹಜವಾಗಿ ಪ್ರಕೃತಿ
ನೀಡಿರುತ್ತದೆ. ಮಾತನ್ನು ಪರಿಸರವೇ ರೂಢಿಸಿಬಿಡುತ್ತದೆ. ಪ್ರಜ್ಞಾವಂತಿಕೆಯಿಂದ, ಅಂತರಂಗದ
ಭಾವ ಶಕ್ತಿಯಿಂದ ಮಾತು ಮತ್ತು ವರ್ತನೆ
ತರಬೇತು ಗೊಂಡಲ್ಲಿ, ಬದುಕು ಸುಂದರ ಸಂಬಂಧಗಳ ನಂದನವಾದೀತು.
ಅಸ್ತವ್ಯಸ್ತವಾದ,,
ತಿದ್ದಿ ತೀಡದ ಮನೋವೃತ್ತಿಯೇ ಬದುಕಿನಲ್ಲಿ
ಕೋಲಾಹಲವನ್ನೇ ಸೃಷ್ಟಿಸುತ್ತದೆ. ಕೇವಲ ಒಂದೇ ಒಂದು ಸಿಗರೇಟಿನ
ವಿವಾದದಲ್ಲಿ ಕೊಲೆಯೇ ಏರ್ಪಡುತ್ತದೆ.
ಅತಿ ಜಾತ್ಯಂಧತೆ, ಮನೆ ಮಗಳನ್ನೇ ಸಾವಿನ ಕ್ರೂರ ಬೆಂಕಿಗೆ
ದೂಡುತ್ತದೆ. ಅತಿಯಾದ ಸ್ವಾರ್ಥ
ಬೃಷ್ಠತೆಗೆ ನೂಕುತ್ತದೆ. ವಾಸ್ತವವನ್ನು
ಅರ್ಥೈಸಿಕೊಳ್ಳಲಾಗದ ಪ್ರಭುತ್ವ, ಮಹಾ ಯುದ್ಧವನ್ನೇ ಸೃಷ್ಟಿಸುತ್ತದೆ. ಅಮಾಯಕರ
ಸಾವು ನೋವಿಗೆ ಕಾರಣವಾಗುತ್ತವೆ. ಧರ್ಮವನ್ನು
ಅರ್ಥೈಸಿಕೊಳ್ಳದ ಧಾರ್ಮಿಕನ ಶುಷ್ಕ ಭಕ್ತಿ
ಧರ್ಮಗಳ ನಡುವೆ ವೈಷಮ್ಯವನ್ನು
ಹುಟ್ಟಿಸುತ್ತದೆ. ದೇವರೊಬ್ಬನೇ ಆದರೂ ನೂರು ಛಿದ್ರರೂಪಗಳಾಗಿ ಅಸಹನೀಯ
ವಾತಾವರಣಕ್ಕೆ ಕಾರಣವಾಗುತ್ತವೆ. ಇದು ಬುದ್ಧಿಯಿದ್ದೂ ಭಾವಶೂನ್ಯತೆಯ
ದುಷ್ಪರಿಣಾಮ.
ಬುದ್ಧಿಯಿದ್ದರೆ ಸಾಲದು.
ಸರಿ ತಪ್ಪುಗಳನ್ನು ತೂಗುವ ಸಾಮರ್ಥ್ಯ ಪಡೆಯಬೇಕು.
ವರ್ತನೆಯ ಪರಿಣಾಮಗಳನ್ನು ಊಹಿಸುವ ದೂರದೃಷ್ಟಿ
ಹೊಂದಬೇಕು. ಸೂಕ್ತ ನಿರ್ಧಾರ ಕೈಗೊಳ್ಳುವ
ಚಾಕಚಕ್ಯತೆ ಮಾತ್ರ ವ್ಯಕ್ತಿತ್ವಕ್ಕೆ ಮೆರಗು ನೀಡಬಲ್ಲದು. ಬುದ್ಧಿಯ
ಜೊತೆಗೆ ಸಂಯಮ ವಿವೇಕ ಸೇರಿದ್ದರೆ ಮಾತ್ರ ಅಹಂಕಾರ ಅಡಗುತ್ತದೆ.
ಪರಸ್ಪರ ಗೌರವ ಹೆಚ್ಚುತ್ತದೆ.
ರಸ್ತೆಯಲ್ಲಿ ಒಂದರ ಹಿಂದೊಂದು
ವಾಹನಗಳು ಸಂಚರಿಸುತ್ತಿರುತ್ತವೆ. ಒಂದು ವಾಹನ ಮುಂದಿನ
ವಾಹನವನ್ನು ಹಿಂದೆ ಹಾಕಿ ಮುಂದೆ
ಸಾಗುತ್ತದೆ. ಯಾರೋ ಎಲ್ಲಿಯವರೋ
ಪರಸ್ಪರ ಯಾವ ಸಂಬಂಧಗಳೂ
ಇಲ್ಲದ ವಾಹನ ಚಾಲಕರಲ್ಲಿ, ತನ್ನಂತಾನೇ
ಪೈಪೋಟಿ ಏರ್ಪಡತೊಡಗುತ್ತದೆ. ವೇಗದ ಸ್ಪರ್ಧೆಗಿಳಿಯುತ್ತಾರೆ. ಒಬ್ಬರನ್ನೊಬ್ಬರು ಹಿಂದಾಗಿಸುವ
ಓಟದಲ್ಲಿ ಅಪಘಾತಕ್ಕೂ ಒಳಗಾಗುತ್ತಾರೆ. ಅಪರಿಚಿತ
ಚಾಲಕರೇಕೆ ಸ್ಪರ್ಧೆಗೆ ಬಿದ್ದರು.
ಮತ್ತೊಬ್ಬನು ತನ್ನನ್ನು ಅತಿಕ್ರಮಿಸಿದ, ಹಿಂದಾಗಿಸಿದ ಎಂಬ ಸಿಟ್ಟಿಗೆ
ಯಾಕೆ ಈಡಾದರು, ಎಂಬ ಪ್ರಶ್ನೆಗೆ
ಉತ್ತರವೇ ಇಲ್ಲ. ಅಲ್ಲಿರುವುದು
ಅವೈಚಾರಿಕತೆ. ಅನಾವಶ್ಯಕವಾಗಿ ಕಾಡುವ ಅಹಮಿಕೆ. ಬುದ್ಧಿ
ಭಾವಗಳ ಉಪಯೋಗದಲ್ಲಾದ ಎಡವಟ್ಟು.
ಇನ್ನು ವ್ಯಕ್ತಿತ್ವದ
ಮತ್ತೊಂದು ಪ್ರಧಾನ ಗುಣ
ಭಾವಶಕ್ತಿಯದು. ಭಾವ ಅಂದರೆ
ಹೃದಯದ ಸ್ಪಂದನ. ಪ್ರೀತಿ
ಕರುಣೆ ಸಹಾನುಭೂತಿ ಅದರ
ಜೀವ. ಸಂಬಂಧಗಳ ನಡುವಣ
ಮಾರ್ದವವೇ ಭಾವದ ಅಸ್ತಿತ್ವ.
ಭಾವ ಅತಿಯಾದರೆ ವಿವೇಕ
ಮಂಕಾಗಿಬಿಡುತ್ತದೆ. ಕೋಪ ಧ್ವೇಷ
ಅಸೂಯೆಯಂತಹ ಭಾವಗಳು ಮಾರಕ.
ಭಾವಕ್ಕೆ ಬುದ್ಧಿಯ ನಿಯಂತ್ರಣ
ಅತೀ ಅವಶ್ಯ.
ವರ್ತನೆ
ಎಂದರೆ
ಒಳಗಿನ
ಚಿಂತನೆ
ಮತ್ತು
ಭಾವಗಳು, ಹೊರಗೆ ಕಾಣಿಸುವ
ವ್ಯಕ್ತ ರೂಪ. ನಮ್ಮ ಮಾತು ನಡೆ, ಮತ್ತು
ಪ್ರತಿಕ್ರಿಯೆಗಳಲ್ಲಿ ಭಾವ
ವ್ಯಕ್ತವಾಗುತ್ತದೆ.
ಆಂತರ್ಯದಲ್ಲಿ ಒಳ್ಳೆಯ ಭಾವವಿದ್ದರೂ
ವರ್ತನೆಯಲ್ಲಿ ದೋಷವಿದ್ದರೆ ಸಂಬಂಧ
ದುರ್ಬಲವಾಗುತ್ತದೆ. ಅದಕ್ಕೆ ಅಬ್ಬರಿಸುವ
ತಂದೆ ಮತ್ತು ಮುಗ್ಧ ಮಕ್ಕಳ
ಉದಾಹರಣೆಯೇ ಸಾಕ್ಷಿ. ಮೃದುವಾದ
ಮಾತು ತಾಳ್ಮೆ, ಮತ್ತು
ವಿನಯದಂತ ಗುಣಗಳು ಮಾತ್ರ
ಸಂಬಂಧಗಳನ್ನು
ಸಹನೀಯವಾಗಿಸುತ್ತವೆ.
ಮಾನವ ಜೀವನವೆಂದರೆ ಕೇವಲ ಉಸಿರಾಟದ ಪ್ರಕ್ರಿಯೆಯಲ್ಲ; ಅದು ನಿರಂತರ ರೂಪಾಂತರದ ಯಾತ್ರೆ. ಪ್ರತಿದಿನವೂ ಮನುಷ್ಯನು ತನ್ನನ್ನು ತಾನೇ ಮನುಷ್ಯತ್ವವನ್ನು ಕಟ್ಟಿಕೊಳ್ಳುತ್ತಾನೆ, ಮತ್ತೆ ಕೆಲವೊಮ್ಮೆ ತನ್ನದೇ ಕೈಗಳಿಂದ ಅದನ್ನು ಕುಸಿದುಕೊಳ್ಳುತ್ತಾನೆ.
ಈ ನಿರ್ಮಾಣ ಮತ್ತು ವಿನಾಶದ ಮಧ್ಯೆ ನಿಂತಿರುವುದು — ವರ್ತನೆ. ಮನುಷ್ಯನ ಚಿಂತನೆಗಳನ್ನು ನಾವು ನೋಡಲಾರೆವು; ಆದರೆ ಅವನ ವರ್ತನೆ ಅವನ ಒಳಮನಸ್ಸಿನ ಕನ್ನಡಿಯಾಗಿ ತೋರುತ್ತದೆ..
ನಮ್ಮ ಜೀವನದ ಅನೇಕ ಸಂಕಟಗಳು ಹೊರಗಿನ ಪರಿಸ್ಥಿತಿಗಳಿಂದ ಹುಟ್ಟಿದಂತೆ ಕಾಣುತ್ತವೆ. ಆದರೆ ಆಳವಾಗಿ ನೋಡಿದರೆ, ಅವುಗಳಿಗೆ ಕಾರಣ ನಮ್ಮ ಪ್ರತಿಕ್ರಿಯೆಗಳೇ ಆಗಿರುತ್ತವೆ. ಒಂದೇ ಘಟನೆ ಇಬ್ಬರ ಜೀವನದಲ್ಲಿ ವಿಭಿನ್ನ ಪರಿಣಾಮ ಉಂಟುಮಾಡುತ್ತದೆ. ಏಕೆಂದರೆ ಘಟನೆಗಿಂತ ಮಹತ್ವದ್ದು ಅದಕ್ಕೆ ನೀಡುವ ವರ್ತನಾ ಪ್ರತಿಕ್ರಿಯೆ. ಈ ಸತ್ಯವನ್ನು ಅರಿತಾಗಲೇ ವರ್ತನೆಯ ತಾತ್ವಿಕ ಅರ್ಥ ನಮಗೆ ಸ್ಪಷ್ಟವಾಗುತ್ತದೆ.
ನಾವು ನಮ್ಮ ವರ್ತನೆಯ ಯಜಮಾನರೇ? ಅಥವಾ ಅಭ್ಯಾಸಗಳ ದಾಸರೇ?
ಅನೇಕ ಬಾರಿ ನಾವು ಕೋಪಗೊಳ್ಳುವುದು ನಮ್ಮ ಇಚ್ಛೆಯಿಂದಲ್ಲ; ಅದು ಅಭ್ಯಾಸವಾಗಿದೆ. ಆತಂಕವೂ ಹಾಗೆಯೇ. ಅಸಹನೆಯೂ ಹಾಗೆಯೇ. ಹೀಗೆ ಜೀವನವು ಯಂತ್ರದಂತೆ ನಡೆಯಲು ಆರಂಭಿಸುತ್ತದೆ. ನಮಗರಿವಿಲ್ಲದೇ ಹತ್ತು ಹಲವು ದೋಷಗಳು, ಪರಿಸರದಿಂದ ನಮ್ಮೊಳಗೆ
ನುಗ್ಗುತ್ತವೆ. ನಮ್ಮ ಭಾವದ ಹರಿವನ್ನ,
ಬುದ್ಧಿಯ ಹರಿತವನ್ನು ಆಗಾಗ
ನಾವೇ ಎಚ್ಚರದಿಂದ ಪರಿಶೀಲಿಸಿಕೊಳ್ಳುತ್ತ, ಸ್ವಯಂ
ವಿಮರ್ಶಿಸಿಕೊಳ್ಳುತ್ತ, ಸಾಗಬೇಕು. ಅರಿವಿಲ್ಲದೇ
ಎರಗುವ ಸಿಟ್ಟು ಸಿಡಿಮಿಡಿ, ಬಾಂಧವ್ಯವನ್ನೇ
ನಾಶಮಾಡಿಬಿಡಬಹುದು. ಆತುರದಲ್ಲಿ
ಕೈಗೊಂಡ ನಿರ್ಣಯ ಕಲಹಕ್ಕೇ
ನಾಂದಿಯಾಗಿ ಬಿಡಬಹುದು.
ʻʻಮನುಷ್ಯನು
ಸಮಾಜದ ಪ್ರತಿಬಿಂಬ. ನಾವು ನೋಡುವುದು, ಕೇಳುವುದು, ಅನುಭವಿಸುವುದೇ ನಮ್ಮ ವರ್ತನೆಯ ಬೀಜವಾಗುತ್ತದೆ. ಮನುಷ್ಯನು ಇತರರನ್ನು ನೋಡಿ ಕಲಿಯುತ್ತಾನೆ ಎಂದು ಹೇಳಿದಾಗ, ಅದು ಸಮಾಜದ ನೈತಿಕ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ಒಳ್ಳೆಯ ಸಮಾಜ ಒಳ್ಳೆಯ ವ್ಯಕ್ತಿಗಳನ್ನು ರೂಪಿಸುತ್ತದೆ.ʼʼ ಎಂದೆನ್ನುತ್ತಾನೆ ಸುಪ್ರಸಿದ್ಧ ಮನೋವಿಜ್ಞಾನಿ ಅಲ್ಬರ್ಟ, ಬಂಡೂರಾ. (Albert Bandura) ಅವನ ಈ ಮಾತೂ
ಸತ್ಯಸ್ಯ ಸತ್ಯ.
“ಮನಸ್ಸನ್ನು ಬದಲಿಸಲು ಯತ್ನಿಸಬೇಡ; ವರ್ತನೆಯನ್ನು ಬದಲಿಸು.
ಮನಸ್ಸು ಸ್ವತಃ ನಿನ್ನ ಹಿಂದೆ ಬರುತ್ತದೆ.”ಇದೇ
ಮಾನವ
ಪರಿವರ್ತನೆಯ
ನಿಶ್ಶಬ್ದ
ಮಾರ್ಗ.
ವಿಶ್ವಂಭರ – ೬. ಸುಮನಾಂಬರ – ೨೭.
ʻʻ ಸಮುದಾಯದ ವ್ಯಥೆ, ಈ ಆತ್ಮಕಥೆ.ʼʼ
ಎಲ್ಲಿ ಆತ್ಮಾನಂದಕ್ಕಾಗಿ ಎಷ್ಟೂ ಕಾಯ ನೋಯಬೇಕಿಲ್ಲವೋ,
ಎಲ್ಲಿ
ಸೌಂದರ್ಯ ಸ್ವಂತದ ಹತಾಶೆಯೇ ಹೆತ್ತ, ಸೃಷ್ಟಿಯಾಗಿಲ್ಲವೋ,
ಮಬ್ಬುಗಣ್ಣ
ವಿವೇಕ ನಟ್ಟಿರುಳ ಅಧ್ಯಯನದಿಂದ
ಹುಟ್ಟಿಲ್ಲವೋ,
ಅಲ್ಲಿ
ಶ್ರಮ ಹೂ ಚಿಮ್ಮಿ, ಕುಣಿದು ಕುಕಿಲಿರಿಯುತ್ತದೆ. (
w.B. Yeats )
ಜಾತಿಗ್ರಸ್ಥ
ದೇಶದ ಅಸ್ಪ್ರಶ್ಯತೆಯ ಮಹಾರೋಗದ
ನಡುವೆ ಸಾವಿರಾರು ಸಮುದಾಯಗಳ
ಸಾಂಸ್ಕೃತಿಕ ಅನನ್ಯತೆಯನ್ನೂ ಹತ್ತಿಕ್ಕಿ
ಶ್ರೇಣೀಕರಣ ದ ಜಂಜಡದಲ್ಲಿ ಬಳಲುತ್ತಿರುವ
ಭಾರತವನ್ನು ಕಂಡಾಗ, ಈ ಇಪ್ಪತ್ತೊಂದನೆಯ
ಶತಮಾನದ, ವೈಜ್ಞಾನಿಕ ಕ್ಷಣದಲ್ಲೂ ಮನಸ್ಸು ಹೈರಾಣುಗೊಳ್ಳುತ್ತದೆ. ಅದೆಷ್ಟೇ
ವೈಜ್ಞಾನಿಕ ವೈಚಾರಿಕ ಶಿಕ್ಷಣ
ನೀಡಲಿ, ಹಳೆಯ ಜಾಡ್ಯ ಹೊಸ
ವೇಷದಲ್ಲಿ ಮತ್ತೆ ಮತ್ತೆ ಆಕ್ರಮಿಸುತ್ತಲೇ ಇರುತ್ತದೆ.
ಜಾತಿಕಾರಣದಿಂದಲೇ ಪ್ರೇಮಿಗಳ ಹತ್ಯೆ,
ಆಹಾರ ಕಾರಣದಿಂದ ದೌರ್ಜನ್ಯ. ಧರ್ಮಾಂಧತೆಯ ಗದ್ದಲ,
ಅವ್ಯಾಹತವಾಗಿ ನಡೆಯುತ್ತಿರುವಾಗ, ಮಾನವೀಯತೆ,
ಸಹನೆ, ಸಹೋದರತೆ, ಸಂಯಮ, ಸೌಜನ್ಯ ಮುಂತಾದ
ಮಾನವೀಯ ಗುಣಗಳೆಲ್ಲ, ಶಬ್ಬದಕೋಶದ
ಗುಹೆಯಲ್ಲಿ,, ಧರ್ಮಗ್ರಂಥಗಳ ಕತ್ತಲೆಯಲ್ಲಿ, ಮರೆಯಾಗಿ
ಹೋಗುತ್ತವೆ.
ಆಧ್ಯಾತ್ಮಿಕತೆ, ತಾತ್ವಿಕತೆ
ಎಂಬುದೆಲ್ಲ ಉಪನ್ಯಾಸದ ಯಾಂತ್ರಿಕ
ಸರಕುಗಳಾಗಿ, ಅದೂ ವ್ಯಾಪಾರೀ
ಬಂಡವಾಳವಾಗಿ ವಿಜ್ರಂಭಿಸುತ್ತಿರುವುದು ಕಟುವಾಸ್ತವ. ʻʻ
ಅಸ್ಪ್ರಶ್ಯನೊಬ್ಬನನ್ನು ಮುಟ್ಟುವ ಮೂಲಕ ಭಾರತೀಯನಾದವ ಮನುಷ್ಯನಾಗುವ
ಪ್ರಕ್ರಿಯೆಗೆ ಚಾಲನೆ ನೀಡಬೇಕು,ʼʼ ಎಂಬ ಮಹಾತ್ಮಾಗಾಂಧಿಯವರ ಶತಮಾನಗಳಷ್ಟು ಹಿಂದಿನ ಮಾತನ್ನು
ಅರಿವಿಗೆ ತಂದುಕೊಂಡಲ್ಲಿ, ಭಾರತೀಯರಾದ
ನಾವು ಮನುಷ್ಯತ್ವದ ಅಂಗಳಕ್ಕೆ
ಇಂದಾದರೂ ಪ್ರವೇಶಿಸಿದ್ದೇವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇ
ಬೇಕಾಗಿದೆ.
ಅಸ್ಪ್ರಶ್ಯನ ಸಾತ್ವಿಕ
ಪ್ರತಿರೋಧ, ಸವರ್ಣೀಯಕನ ತಾತ್ವಿಕ
ಪಶ್ಚಾತ್ತಾಪ, ಮಾತ್ರ ಭಾರತವನ್ನು
ಸಹನೀಯ ದೇಶವನ್ನಾಗಿ ಪರಿವರ್ತಿಸಬಲ್ಲದು, ಎಂಬ ಯು.ಆರ್.
ಅನಂತಮೂರ್ತಿಯವರ ನುಡಿ ಸಾರ್ವಕಾಲಿಕ
ಸತ್ಯವಾಗಿ ಮೊಳಗುತ್ತದೆ. ಸತ್ಯ ತನ್ನಷ್ಟಕ್ಕೆ ತಾನು ಸ್ವಥಃಶ್ಚಲಿಯಲ್ಲ. ಆಚರಣೆಯ ನೆಲೆಗೇರಬೇಕು.
ಈ ಮಾತುಗಳು
ಈಗೇಕೆ ಪುನರಾವರ್ತನೆಗೊಂಡಿದೆಯೆಂದರೆ, ಇದೇ ವರ್ಷ ಪ್ರಕಟವಾದ ಉತ್ತರಕನ್ನಡಜಿಲ್ಲೆಗೆ ಅತ್ಯಂತ
ಪ್ರಮುಖವಾದ ಡಾ- ಆರ್.ಜಿ. ಗುಂದಿಯವರ ಆತ್ಮಕಥೆ,
ʻʻಕೇರಿ ಕೊಪ್ಪಗಳ ನಡುವೆʼʼ ಕೃತಿ ಎಂದರೆ ಅತಿಶಯೋಕ್ತಿಯಲ್ಲ.
ದಲಿತ ಜನಾಂಗಗಳು ಸೇರಿ, ಸಮಾಜದ
ಅಂಚಿನಲ್ಲಿರುವ ಅಸಂಖ್ಯ ತಳವರ್ಗಗಳ ಸುಶಿಕ್ಷಿತ
ಸಂವೇದನೆಗೆ ಚೈತನ್ಯವೊದಗಿ ಶತಮಾನವೇ
ಕಳೆಯುತ್ತಿದೆ. ಮರಾಠೀ ಭಾಷೆಯಲ್ಲಿ
ಪ್ರಕಟಗೊಂಡಿರುವ ಅಂಬೇಡ್ಕರ ಕೃತಿಗಳಾಗಲೀ,
ಉಚಲ್ಯಾ. ಅಕರಮಾಶಿ ಮುಂತಾದ
ದಲಿತ ಆತ್ಮಕತೆಗಳಾಗಲೀ, ಇಡೀ ಭಾರತೀಯ ಸಾರಸ್ವತ
ಜಗತ್ತಿನಲ್ಲಿ ಮೂಡಿಸಿದ ಸಂಚಲನವನ್ನು
ಎಚ್ಚರ ಚಚ್ಚರವನ್ನು ನಾವು ಮತ್ತೆ ಸ್ಮರಿಸಿಕೊಳ್ಳಲೇ ಬೇಕಿದೆ.
ನಮ್ಮೊಂದಿಗಿದ್ದೂ ನಮ್ಮವರಾಗದೇ, ವರ್ಣಶ್ರೇಣಿಯಾಚೆಗೆ ತಳ್ಳಲ್ಪಟ್ಟ
ಕೋಟಿ ಕೋಟಿ ಆತ್ಮಗಳ
ಮೌನ ಆಕ್ರಂದನಕ್ಕೆ, ಸ್ಪಂದಿಸುತ್ತಿರುವ ಕೆಲವೇ ಕೆಲವು ಆಧುನಿಕ
ಮನಸ್ಸುಗಳು, ಇವ ನಮ್ಮವ, ಇವ ನಮ್ಮವ ಎಂದು
ಘೋಷಿಸುತ್ತಿರುವುದು ನಿಜಕ್ಕೂ ಭಾರತೀಯ
ಇತಿಹಾಸಕ್ಕೆ ಸೇರಲೇ ಬೇಕಾದ ಮಹತ್ವಪೂರ್ಣ
ಕ್ಷಣ ಎಂದು ತಿಳಿದಿದ್ದೇನೆ.
ಡಾ- ರಾಮಕೃಷ್ಣಗುಂದಿ, ಉತ್ತರಕನ್ನಡ
ಜಿಲ್ಲೆಯ ಅಂಕೋಲಾ ತಾಲೂಕಿನ, ನಾಡೂಮಾಸ್ಕೇರಿಯಲ್ಲಿ ಜನಿಸಿದ( 1953)
ಅಗೇರ ಜನಾಂಗದ ಮೊಟ್ಟಮೊದಲ
ಸ್ನಾತಕೋತ್ತರ ಪದವೀಧರ. ಕಾಲೇಜ ಉಪನ್ಯಾಸಕ. ಪ್ರಾಂಶುಪಾಲ.
ಯಕ್ಷಗಾನ ಕಲಾವಿದ, ಯಕ್ಷಕೃತಿ
ರಚನಾಕಾರ, ಕತೆಗಾರ, ಕವಿ. ಸೌಜನ್ಯ, ಸಂಯಮ, ಛಲ, ಅಧ್ಯಯನಶೀಲತೆ,
ಸೃಜನಶೀಲತೆ, ಸಾಂಸ್ಕೃತಿಕ ಸಂಘಟನೆ, ಮತ್ತು ಸ್ನೇಹಶೀಲ ಗುಣಗಳ ಗಣಿಯಾಗಿ, ಸ್ಪ್ರಶ್ಯಲೋಕದ
ಅಂತರಂಗದಲ್ಲಿ, ಹೊಚ್ಚಹೊಸ ಹೂವಾಗಿ,
ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಸುಂದರ ಕತೆಗಳನ್ನು
ನೀಡಿ ಗಮನಸೆಳೆದಿದ್ದಾರೆ.
ತಮ್ಮ ಬದುಕಿನ ನೋವು ತಲ್ಲಣ, ಸುಖ ದುಃಖ, ಸ್ಪ್ರಶ್ಯತೆ
ಅಸ್ಪ್ರಶ್ಯತೆಗಳೆಲ್ಲದರ ದಟ್ಟ ಅನುಭವಗಳನ್ನು ಯಾವ ಆಕ್ರೋಶ ಅತಿರೇಕಗಳಿಲ್ಲದ ಸಂಯಮಶೀಲ
ನುಡಿಯಲ್ಲಿ, ಸಹೃದಯರೆದುರು ತೆರೆದಿಟ್ಟ ಆತ್ಮಕತೆ, ಕೇರಿ
ಕೊಪ್ಪಗಳ ನಡುವೆ, ಒಂದೇ ಓದಿಗೆ ಆಕರ್ಷಿಸುತ್ತದೆ.
ಅಗೇರ ಸಮುದಾಯದ
ಮೊದಲ ಶಾಲಾಶಿಕ್ಷಕರಾಗಿ, ವಿದ್ಯಾರ್ಥಿಪ್ರಿಯ ಬೋಧಕರಾಗಿ,
ಜನಮನ್ನಣೆ ಗಳಿಸಿದ ತಂದೆ. ಗಣಪು ಅಗೇರ್
ರವರ ಒತ್ತಾಸೆ ಪ್ರೋತ್ಸಾಹದಲ್ಲಿ, ರಾಮಕೃಷ್ಣ ಗುಂದಿ ಶಿಕ್ಷಣದಲ್ಲಿ
ಉನ್ನತಿ ಸಾಧಿಸುತ್ತಾರೆ. ಸುತ್ತಲಿನ
ಸಾಮಾಜಿಕ ಮೇಲು ಕೀಳಿನ ಜಾಡ್ಯದ
ನಡುವೆಯೇ ತಾಳ್ಮೆಯಿಂದ ಅತ್ಯಂತ
ಸಂಯಮದಿಂದ ತಮ್ಮ ಶಿಕ್ಷಣಯಾನದ
ಅತ್ಯುಚ್ಛ ನೆಲೆ ತಲುಪುತ್ತಾರೆ. ಸವರ್ಣೀಯರ
ನಡುವೆ, ಆತ್ಮವಿಶ್ವಾಸ ಆತ್ಮಸ್ಥೈರ್ಯಗಳನ್ನೇ ತಮ್ಮ ಯಶಸ್ಸಿನ ಮೂಲವನ್ನಾಗಿ
ಸ್ವೀಕರಿಸಿ, ಮೌನದಲ್ಲೇ ಸಾಧನೆಯ
ರಂಗಪ್ರವೇಶಿಸುತ್ತಾರೆ.
ಅವಿರತ ಅಧ್ಯಯನ,
ಬೋಧನೆಯಲ್ಲಿ ತನ್ಮಯತೆ ಉಚ್ಛ ಬೋಧನಕಲಾ ಪರಿಣತಿಯಿಂದ
ವಿದ್ಯಾರ್ಥಿಪ್ರಿಯ ಶಿಕ್ಷಕರಾಗಿ ತಮ್ಮ ಬೋಧನಾ
ವೃತ್ತಿಗೆ ನ್ಯಾಯ ಸಲ್ಲಿಸುತ್ತಾರೆ. ಅಂಕೋಲಾ
ಕಾಲೇಜ ಉಪನ್ಯಾಸಕರಾಗಿ, ವೃತ್ತಿ
ಪ್ರಾರಂಭಿಸಿ, ಕಾರವಾರ ದಿವೇಕರ
ಕಾಲೇಜ ಪ್ರಾಂಶುಪಾಲರಾಗಿ ನಿವೃತ್ತಿ( ೨೦೦೮) ಯಾಗುವರೆಗಿನ
ಅವಧಿಯ ತಮ್ಮ ಬದುಕಿನ
ವೈವಿಧ್ಯ ಅನುಭವಗಳನ್ನು, ಪ್ರಸ್ತುತ ಕೃತಿಯಲ್ಲಿ
ಕಟ್ಟಿಕೊಟ್ಟಿದ್ದಾರೆ.
ಗುಂದಿ ಮಾಸ್ತರ್
ಕೇವಲ ಉಪನ್ಯಾಸಕರಲ್ಲ, ಅವರೊಳಗೊಬ್ಬ
ಅದ್ಭುತ ಕಲಾವಿದನಿದ್ದಾನೆ. ಬದುಕಲು
ಒಂದು ವೃತ್ತಿ ಅನಿವಾರ್ಯ.
ದುಡಿಮೆ ಆವಶ್ಯಕ. ಆದರೆ ʻʻ ದುಡಿಮೆಯ
ಕ್ಷಣದಲ್ಲಿ ವ್ಯಕ್ತಿಯ ದೈಹಿಕ
ಮತ್ತು ಮಾನಸಿಕ ವ್ಯಕ್ತಿತ್ವಕ್ಕೆ ಆಯಾಸ,ವುಂಟಾಗಿ, ವ್ಯಕ್ತಿತ್ವದ
ಚೈತನ್ಯ ತನ್ನ ಕಸುವು ಕಳೆದುಕೊಳ್ಳುತ್ತದೆ. ಕಳೆದ ಕಸುವು
ಮರುಪೂರಣಗೊಳ್ಳುವುದು, ಕಲೆ ಕ್ರೀಡೆಗಳ ಆಪ್ತ ಸ್ಪರ್ಶದಲ್ಲಿ.
ಆ ಕ್ಷಣದ
ಸಾಂಸ್ಕ್ರತಿಕ ಸೃಜನಶೀಲ ಚಟುವಟಿಕೆಯಲ್ಲಿ. ಸಾಂಸ್ಕೃತಿಕ
ಪ್ರಕ್ರಿಯೆಯಲ್ಲಿ ತೊಡಗಿಕೊಂಡ ವ್ಯಕ್ತಿತ್ವ ಮಾತ್ರ ಸದಾ ಚಲನಶೀಲವಾಗಿರುತ್ತದೆ, ʼʼ ಎಂಬುದರ ನೆಲೆಯಲ್ಲಿ
ಗುಂದಿಯವರ ಬದುಕನ್ನು ಗಮನಿಸಿದಾಗ, ಅವರೆಲ್ಲ
ಯಶಸ್ಸಿನ ಹಿನ್ನೆಲೆಯಲ್ಲಿ, ಅವರ ಸೃಜನಶೀಲ ಚಟುವಟಿಕೆಯೇ
ಕಾರಣ, ಎಂಬುದು ಮನದಟ್ಟಾಗುತ್ತದೆ.
ಬಾಲ್ಯದಿಂದಲೂ ತಮ್ಮ ಮನಸ್ಸಿನೊಳಗೆ ಯಕ್ಷಕಲಾಸಕ್ತಿಯನ್ನು ಕಾದಿಟ್ಟುಕೊಂಡು, ತಾವು ಬೆಳೆದಂತೇ ಯಕ್ಷಕಲೆಯ
ಸಾಂಗತ್ಯವನ್ನು ಪೋಷಿಸಿಕೊಳ್ಳುತ್ತ, ಯಕ್ಷಗಾನ
ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು
ಗಳಿಸಿಕೊಳ್ಳುವಲ್ಲಿ ಅವರ ತಪಸ್ಸು
ಬೆರಗು ಮೂಡಿಸುತ್ತದೆ. ದಕ್ಷಿಣೋತ್ತರ ಕನ್ನಡದ
ಎಲ್ಲ ದಿಗ್ಗಜ ಕಲಾವಿದರ ಸ್ನೇಹಸಂಪಾದಿಸಿಕೊಂಡ, ಗುಂದಿಯವರು ಕಲಾವಿದರೆಲ್ಲರ ಕಲಾಸೂಕ್ಷ್ಮಗಳನ್ನು ಆವಾಹಿಸಿಕೊಳ್ಳುತ್ತ, ತಮ್ಮದೇ
ಆದ ವೈಶಿಷ್ಟ್ಯವನ್ನು ರೂಪಿಸಿಕೊಂಡು, ಪ್ರೇಕ್ಷಕರ
ಅಚ್ಚುಮೆಚ್ಚಿನ ಯಕ್ಷಕಲಾವಿದರಾಗಿ ಬೆಳೆದಿದ್ದು
ಅದೊಂದು ದೊಡ್ಡ ಸಾಧನೆ.
ಗದಾಪರ್ವದ ಸುಯೋಧನನ ಪಾತ್ರ ಜಿಲ್ಲೆಯಲ್ಲಿ ಮನೆಮಾತಾಯಿತು.
ಕಂಸ ಮಾಗಧ ದುಷ್ಟಬುದ್ಧಿ,
ಚಂದ್ರಹಾಸ ಋತುಪರ್ಣ ಮುಂತಾದ
ಪಾತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ
ಅಪರೂಪದ ಕಲಾವಿದರಾಗಿ ಬೆಳಗಿದರು.
ಇವರ ಬಹುಮುಖೀ ಕಲಾಸಾಧನೆಯನ್ನು ಗುರುತಿಸಿದ ಕರ್ನಾಟಕ
ಯಕ್ಷಗಾನ ಅಕಾಡೆಮಿ, ಯಕ್ಷಗೌರವ ಪ್ರಶಸ್ತಿ ನೀಡಿ ಸಮ್ಮಾನಿಸಿದೆ.
ಕಲಾವಿದರೊಂದೇ ಅಲ್ಲದೇ
ಮಹಾಸತಿ ಅರುಂಧತಿ, ವೀರವಾಲಿ, ನಾಗಲೋಕವಿಜಯ ಮುಂತಾದ
ಯಕ್ಷಪ್ರಸಂಗಗಳನ್ನು ರಚಿಸಿ, ಪ್ರಯೋಗಗಳಲ್ಲೂ
ಅವು ಯಶಪಡೆಯುವಂತಾದದ್ದು, ಅವರ ಪ್ರತಿಭೆಗೆ ಗರಿಯೊದಗಿದಂತಾಯಿತು.
ಕೃತಿಗೆ ಜಾನಪದ
ವಿಧ್ವಾಂಸ, ಕವಿ ಡಾ. ಶ್ರೀಪಾದ
ಶೆಟ್ಟಿ, ಯವರ ಮುನ್ನುಡಿ , ಕೃತಿಯ ಸಂವೇದನೆಯನ್ನು
ಆಳವಾಗಿ ಗುರುತಿಸಿ, ಡಾ. ಗುಂದಿಯವರನ್ನು ಮತ್ತಷ್ಟು
ನಮ್ಮ ಆಪ್ತವಲಯಕ್ಕೆ ತಂದಿದೆ. ತಮ್ಮ ಮಾತುಗಳಲ್ಲಿ,
ʻʻ ಪ್ರಸ್ತುತ ಆತ್ಮಚರಿತ್ರೆ ಬೂದಿ ಮುಚ್ಚಿದ
ಕೆಂಡದಂತಿದೆ. ಸವರ್ಣೀಯ ಸಮಾಜದ ಜಾತಿ ಎಂಬುದು, ಕ್ಯಾನ್ಸರ್ ಎಂಬ ವ್ಯಾಧಿಯಿಂದ ಬಳಲುತ್ತಿರುವ , ಹಲವು ಸಮುದಾಯಗಳು ಅನುಭವಿಸುವ
ಸುಪ್ತ ಸಂಕಟದ ಕಥೆಯೇ ಇಲ್ಲಿ ಮೈತಳೆದು
ನಿಂತಿದೆ ಅಂದರೆ ಉತ್ಪ್ರೇಕ್ಷೆಯಲ್ಲ. ನಮ್ಮಂತೆಯೇ ಇರುವ ಒಂದು
ವರ್ಗದ ಮನುಷ್ಯರನ್ನು ನೋಡುವ ಒಡನಾಡುವ
ಮಾತನಾಡುವ ಸಂದರ್ಭದಲ್ಲಿ ಜಾತೀಯತೆಯ
ರೋಗ ಉಲ್ಬಣಿಸುತ್ತಿರುವ ಪರಿಯನ್ನು
ಮೌನವಾಗಿ ಗುರುತಿಸುವ ಗುಂದಿಯವರು
ಇವುಗಳ ನಡುವೆಯೇ ತಮ್ಮ ವ್ಯಕ್ತಿತ್ವ ಮುಕ್ಕಾಗದಂತೇ ಬೆಳೆಸಿಕೊಂಡಿದ್ದಾರೆ ʼʼ ಎಂದೆನ್ನುತ್ತ,
ಕೆಂಡದ ಬದುಕಿನ ನಡುವೆಯೇ
ತಂಪು ಬೆಳಕಾದ ಗುಂದಿಯವರ
ಸಿದ್ಧಿ ಸಾಧನೆಗಳನ್ನು ಗುರುತಿಸುತ್ತಾರೆ.
ಗುಂದಿಯವರ ವ್ಯಕ್ತಿತ್ವದ
ಇನ್ನೊಂದು ಪ್ರಮುಖವಾದ ವಿಭಾಗ ಕತೆಗಾರನದ್ದು. ಅವಾರಿ,
ಕಡಲಬೆಳಕಿನ ದಾರಿಗುಂಟ, ಅತಿಕ್ರಾಂತ,
ಸೀತೆದಂಡೆ ಹೂವೇ, ಮುಂತಾದ ಕಥಾಸಂಕಲನಗಳಲ್ಲೇ ಶತಮಾನಗಳ
ಕಾಲ ಹರಿದುಬಂದ, ವರ್ಣಭೇದ,
ಮತ್ತು ಸಾಮಾಜಿಕ ಅವಮಾನಗಳನ್ನು ಪರಿಣಾಮಕಾರಿಯಾಗಿ, ಕಲಾತ್ಮಕವಾಗಿ
ಕಟ್ಟಿಕೊಟ್ಟಿದ್ದಾರೆ. ಅವರ ಆತ್ವಕತೆಯಾಗಲೀ,
ಕತೆ ಕಾದಂಬರಿಗಳಾಗಲೀ, ಅದು ಕೃತಕ ಕಲ್ಪನೆಗಳ
ಮೂಲಕ ಅಭಿವ್ಯಕ್ತ ವಾಗಿಲ್ಲ. ಕೆಂಪು ಚರಿತ್ರೆ
ಯ ಬಗೆಗೆ,
ಕಟು ವಾಸ್ತವದಲ್ಲಿ ನಿಂತು ನೀಡಿರುವ
ಸಾಕ್ಷ್ಯ ಅದು. ಅದೊಂದು
ಸಾಮಾಜಿಕ ಕಟು ಸತ್ಯದ ದಾಖಲೆ.
ಗುಂದಿಯವರ ಸಾರಸ್ವತ ಸಾಧನೆಯನ್ನು
ಗಮನಿಸಿದ ಜಿಲ್ಲೆಯ ಪ್ರತಿಷ್ಠಿತ
ಸಂಕಲ್ಪ ಸೇವಾಸಂಸ್ಥೆ, ಕಾಸರಗೋಡು ಎಡನೀರು
ಮಠ, ಯುವವಾಹಿನಿ ಮಂಗಳೂರು, ಕೈಗಾ ಸಹ್ಯಾದ್ರಿ ಕನ್ನಡ ಸಂಘದ ಅಡಿಗ ಪ್ರಶಸ್ತಿ,
ಬಂಗಾರಮಕ್ಕಿಯ ಜಾನಪದ ಪ್ರಶಸ್ತಿ ಮುಂತಾದ
ಹತ್ತು ಹಲವು ಪ್ರಶಸ್ತಿಗಳು ಗುಂದಿಯವರನ್ನು
ಅರಸಿ ಬಂದಿವೆ. ಕರ್ನಾಟಕ ಯಕ್ಷಗಾನ
ಅಕಾಡೆಮಿ, ಡಾ.ಗುಂದಿಯವರ ಕಲೆ ಮತ್ತು
ಬದುಕಿನ ಹಿನ್ನೆಲೆಯಲ್ಲಿ ರೂಪಿಸಿದ ಸಾಕ್ಷ್ಯಚಿತ್ರ, ಆಕರ್ಷಕವಾಗಿ
ಮೂಡಿಬಂದಿದೆ.
ಡಾ.ರಾಮಕೃಷ್ಣ ಗುಂದಿಯವರ ಬದುಕು ಮತ್ತು ಬರಹಗಳ ಬಗೆಗೇ ಜಿಲ್ಲೆಯಲ್ಲಿ
ವಿಚಾರ ಸಂಕಿರಣ, ವಿಮರ್ಶಾ ಗೋಷ್ಠಿಗಳು ಏರ್ಪಟ್ಟರೆ, ಈ ವೈಶಿಷ್ಟ್ಯಪೂರ್ಣ ಅಕ್ಷರ ಮತ್ತು
ಕಲಾಸಾಧನೆಯ ವ್ಯವಸ್ಥಿತ ಪರಿಚಯ,
ಸಹೃದಯರಿಗಾದೀತು. ಸಂವಿಧಾನದ
ಸಮಾನತೆ ಸೌಹಾರ್ದತೆ, ಸಹೋದರತೆಯ ಕನಸು ನನಸಾದೀತು.
ಕೇರಿ ಕೊಪ್ಪದ ನಡುವೆ ಬೆಳೆದು ಬಾಳುತ್ತಿರುವ
ಈ ವೃಕ್ಷ ಸಿರಿಗಂಧ, ಶಿರವೆತ್ತಿ ಹೊರವಾಗಿ
ಚುಂಬಿಸುತ್ತಿದೆ ಅಂಬಾರವ.
ಯಕ್ಷಲೋಕದ ಕನಸ ಅಕ್ಷರದಲಿ ಬಿತ್ತಿ
ಭೂತ ದೊಳಗಣ ಕಸಕಡ್ಡಿ ಎತ್ತಿ,
ಸೃಷ್ಟಿಸಿದೆ, ಶುಚಿ ರುಚಿ ಸಂಬಾರವ.
ಕೃತಿ- ಕೇರಿಕೊಪ್ಪಗಳ ನಡುವೆ. ಆತ್ಮಚರಿತ್ರೆ. ಪುಟ,-೨೩೬.
ಬೆಲೆ –ರೂ ೨೯೫-೦೦. ಗೌರವ ಪ್ರಕಾಶನ ಮೈಸೂರು.
No comments:
Post a Comment