Posts

Showing posts from November, 2023

`` ಸತ್ವಪೂರ್ಣ ಸಾಧಕ- ಸಿಂಧೊಳ್ಳಿ ಸನದಿ.

            ಕವಿತೆ   ಮಾನವ ಸೃಷ್ಟಿಸಿಕೊಂಡ ಒಂದು ವಿಶಿಷ್ಟ ಜಗತ್ತು .   ಅನನ್ಯ ಅನುಭವಗಳ ರಸಲೋಕ . ಮಾನವ ಮನಸ್ಸು ಮತ್ತು ಬದುಕು ಕಂಡ ಉಂಡ ಸೂಕ್ಷ ö ್ಮ ಅನುಭವಗಳೆಲ್ಲ , ವಿಶಿಷ್ಟ ಅರ್ಥವಂತಿಕೆಯಿಂದ ಆಕರ್ಷಕವಾದ ಭಾಷಾಶರೀರದಲ್ಲಿ   ಅವತರಣಗೊಂಡಿರುವ ಈ ಅಕ್ಷರ ಮಾಧ್ಯಮ , ಸದಾ ಹೊಸತನದಿಂದ ಕಂಗೊಳಿಸುತ್ತವೆ . ಆವಾವ ಕಾಲದ ಗುಣ ಶೀಲ ಮತ್ತು ಬದುಕಿನ ಗತಿಬಿಂಬಗಳನ್ನು ಮೈಗೂಡಿಸಿಕೊಳ್ಳುವ ಕಾವ್ಯಕಲೆ ಅದೊಂದು ಮನಸ್ಸಿನ ಉನ್ನತ ಪ್ರತಿಭಾ ಪ್ರತಿಕ್ರಿಯೆ .   ಕಾವ್ಯದ ಭಾಷೆ ಕಾವ್ಯದ ಅಭಿವ್ಯಕ್ತಿ   ಗದ್ಯ ಅಥವಾ ಮಾತಿನ ಹಾಗಲ್ಲ . ಇದೂ ತನ್ನ ಹರಿವಿಗೆ ಭಾಷೆಯನ್ನೇ ಅವಲಂಬಿಸಿದರೂ   ಅದು ಕೇವಲ ಒಂದು ಮಾಧ್ಯಮ ಅಷ್ಟೇ . ಕವಿಯ ಅಂತರ A ಗದಲ್ಲಿ ಚಿಮ್ಮುವ ಭಾವ ಪ್ರವಾಹಕ್ಕೆ ಭಾಷೆ ಸಾತ್ ನೀಡುತ್ತದೆ . ವಿವಿಧ ಪ್ರತಿಮೆ ಪ್ರತೀಕ ಉಪಮೆ ಛಂದಸ್ಸು ಗಳೆಂಬ ಸಾಧನ ಬಳಸಿ ಹೊಸದೊಂದು ಆರ್ಥಪರಂಪರೆಯನ್ನು ಸೃಷ್ಟಿಸಿ ಸಹೃದಯನ ಭಾವಕೋಶವನ್ನು ಸೇರಿಕೊಳ್ಳುತ್ತದೆ . ಒಂದೊಂ ದು ಮನಸ್ಸಿನಲ್ಲಿಯೂ ವೈವಿಧ್ಯಮಯ ಭಾವನೆಯ ಅಲೆಗಳನ್ನು ಸೃಷ್ಟಿಸುತ್ತದೆ .   ಕಾವ್ಯ ಅಂದರೆ ಭಾವ ಭಾವಗಳ ನಡುವೆ   ಹೃದಯ ಹೃದಯಗಳ ನಡುವೆ ಐಕ್ಯತೆಯನ್ನು ನಿರ್ಮಿಸುವ ಒಂದು ಅದ್ಭುತ ...

ಹೃದಯವೆಂಬ ಸತ್ಯ-----ಹಾಸ್ಯವೆಂಬ ಕನಸು.

  ಹಾಸ್ಯವನ್ನೇ ಕೀಳಾಗಿ ಕಾಣುವ ಗಂಭೀರಿಗಳು ನಮ್ಮಲ್ಲಿದ್ದಾರೆ.  ತಾವೂ ನಗದೇ ನಗುವವರನ್ನು ನಗಗೊಡದೇ  ಇಢೀ ವಾತಾವರಣವನ್ನೇ  ವಿಚಿತ್ರ ಗಾಂಭೀರ್ಯದಲ್ಲಿ  ಸ್ಥಗಿತಗೊಳಿಸುವವರು ನಮ್ಮ ನಡುವಣ  ಖಳನಾಯಕರು  ಎಂದರೆ ತಪ್ಪಾಗದು.  ನಗುವುದೇ ಪ್ರತಿಷ್ಠೆಗೆ ಕುಂದು, ಘನತೆಗೆ ಧಕ್ಕೆ , ಎಂದು ತಿಳಿಯುವ ಮನಸ್ಸು ಅದೆಷ್ಟೇ ಸಾಮಾಜಿಕ ಪ್ರತಿಷ್ಠೆ ಗಳಿಸಿರಲಿ  ಆ ವ್ಯಕ್ತಿತ್ವಕ್ಕೆ ವಿಚಿತ್ರ ಮನೋರೋಗದ ಸೋಂಕು ತಗಲಿದೆ ಎಂದೇ  ಅರ್ಥ. ನವರಸಗಳಲ್ಲಿ  ಹಾಸ್ಯವೂ ಒಂದು ರಸವಾದರೂ À ವರ್ಗ  ಶ್ರೇಣಿ  ಮೇಲು ಶ್ರೇಷ್ಠ  ಎಂಬೆಲ್ಲ ಮಿಥ್ಯೆಗಳ ಬಲೆಯಲ್ಲಿ ಸಿಕ್ಕ  ಮಾನವ ಮನಸ್ಸು  ಹಾಸ್ಯ ರಸವನ್ನ ಇನ್ನೂ ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ. ದುಃಖ ಕರುಣೆ ಶ್ರಂಗಾರ ರೌದ್ರ ಗಳ ದಟ್ಟಡವಿಯಲ್ಲಿಯ ಏಕತಾನತೆಯನ್ನ ದೂರಗೊಳಿಸುವ ಸಾಧನವಾಗಿ ಮಾತ್ರ ಹಾಸ್ಯ ಬಳಕೆಯಾಗುತ್ತದೆಯೇ ಹೊರತು  ಹಾಸ್ಯದ ಸ್ಥಾನ ಔಚಿತ್ಯ ಪಡೆದಿಲ್ಲ.   ``ಶತೇಷು ಜಾಯತೇ ಶೂರಾಃ  ಸಹಸ್ರೇಶುಚ ಪಂಡಿತಃ, ವಕ್ತೃದಶ ಸಹಸ್ರೇಷುಚ ”  ನೂರರಲ್ಲಿ ಒಬ್ಬ ಶೂರ,ಸಾವಿರಕ್ಕೊಬ್ಬ ಪಂಡಿತ, ಹತ್ತು ಸಾವಿರಕ್ಕೊಬ್ಬ ಮಾತುಗಾರನಿರುತ್ತಾನಂತೆ.  ಆದರೆ ನಿಜವಾದ ಹಾಸ್ಯಗಾರ ಮಾತ್ರ ಮತ್ತೂ ಅಪರೂಪ.   ``ಲಕ್ಷೇಷು  ಜಾಯತೇ  ಹಾಸ್ಯಗಾರಃ  ಎಂಬ ಇನ್ನೊಂದು ಮಾತನ್...