Thursday 4 August 2011

ಅವತಾರಗಳು ಮತ್ತು ರಾಕ್ಷಸರು

ಭಾರತೀಯ ಪುರಾಣಗಳು ಮಹಾಕಾವ್ಯಗಳೊಂದೇ ಅಲ್ಲ, ಜಗತ್ತಿನಎಲ್ಲ ಮಹಾಕಾವ್ಯಗಳ ಗುರಿಯೂ ಮನುಷ್ಯನೊಳಗೆ ಇದ್ದಕ್ಕಿದ್ದಂತೇಸೃಷ್ಟಿಯಾಗುವ ರಾಕ್ಷಸ ಪ್ರವೃತ್ತಿಯನ್ನು ನಾಶ ಮಾಡುವುದೇ ಆಗಿದೆ. ಯಾವುದೋ ಒಂದು ದೇವತೆ ತಪಸ್ಸಿಗೆ ಮೆಚ್ಚಿ ವರ ನೀಡುತ್ತದೆ.ವರಪಡೆದ ಮನುಷ್ಯ ಏಕಾಏಕಿ ಮದವೇರಿ ಲೋಕಕಂಟಕನಾಗಿ ಪರಿವರ್ತನೆ ಗೊಳ್ಳುತ್ತಾನೆ. ಆಗ ಸಮಸ್ತ ಜಗತ್ತು ಸಂಕಟದಲ್ಲಿ ತಲ್ಲಣಿಸುತ್ತದೆ. ವರ ಮದದಿಂದ ರಾಕ್ಷಸನಾಗಿ ಪರಿವರ್ತಿತಗೊಂಡ ಮನುಷ್ಯನನುತಹಬಂದಿಗೆ ತರಲು ದೇವರು ವಿಶೇಷ ಅವತಾರವನ್ನೇ ಎತ್ತಿ ಬರಬೇಕಾಗುತ್ತದೆ. ನಮ್ಮ ದೇಶದ ಪುರಾಣಗಳೆಲ್ಲ ದುಷ್ಟರನ್ನ ನಿಗ್ರಹಿಸುವದೃಷ್ಟಾಂತಗಳಿಂದಲೇ ತುಂಬಿಹೋಗಿದೆ.
ಈ ವಾರ ನಮ್ಮ ರಾಜ್ಯದಲ್ಲಿ ನಡೆದ ಇನ್ನೂ ನಡೆಯುತ್ತಿರುವರಾಜಕೀಯದ ನಾಟಕೀಯ ವಿದ್ಯಮಾನಗಳನ್ನು ನೋಡಿದರೆ ಪುರಾಣಕಾಲ್ ಮತ್ತೆ ಪುನರಾವರ್ತನೆ ಗೊಳ್ಳುತ್ತಿದೆಯೇನೊ ಎಂದೆನ್ನಿಸುತ್ತದೆ. ದೇಶಾದ್ಯಂತ ಎಲ್ಲ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ವಿಜ್ರಂಭಿಸಿದ ನಮ್ಮ ರಾಜ್ಯದ ರಾಜಕೀಯ ಪ್ರಹಸನ, ಭಾರತೀಯ ಪ್ರಜಾಪ್ರಭುತ್ವವನ್ನು ಮತ್ತು ಪ್ರಜೆಗಳನ್ನು ಹಗಲಿನಲ್ಲಿಯೇ ನಗ್ನಗೊಳಿಸಿಬಿಟ್ಟಿತು.  ಭಾರತೀಯ ಸಂದರ್ಭದಲ್ಲಿ ಭೃಷ್ಟಾಚಾರ ಸ್ವಜನಪಕ್ಷಪಾv  ಅಧಿಕಾರ ಲಾಲಸೆ, ಸ್ವಾರ್ಥ ಸಂಕುಚಿತತೆ ಅಪರೂಪವೇನಲ್ಲ. ರಾಜಶಾಹಿಯಿಂದ ಈವರೆಗೂ ನಾವು ಕಂಡಿದ್ದು ಇದನ್ನೇ. ನಮ್ಮ ರಾಜ್ಯದಲ್ಲಿಯೂ ಇದು ಅಪರೂಪವೇನಲ್ಲ.  ದೇವರಾಜ ಅರಸ್ ಮತ್ತು ರಾಮಕೃಷ್ಣಹೆಗಡೆ ಯವರ ಮುಖ್ಯಮಂತ್ರಿತ್ವದ ಕಾಲದಲ್ಲಿ ಭ್ರಷ್ಟಾಚಾರದ ಆರೋಪ ಮುಗಿಲುಮುಟ್ಟಿತ್ತು. ಅಂಥ ಸಂದರ್ಭದಲ್ಲಿ ಎಲ್ಲ ಸಾಮಾನ್ಯವಾಗಿಮುಖ್ಯಮಂತ್ರಿಗಳು ತಕ್ಷಣದಲ್ಲಿ ರಾಜೀನಾಮೆ ನೀಡಿದ್ದನ್ನು ಸ್ಮರಿಸ ಬಹುದಾಗಿದೆ. sಆದರೆ ಇಲ್ಲಿ ಅದರ ತದ್ವಿರುದ್ಧ ಪರಿಸ್ಥಿತಿ. ರಾಷ್ಟ್ರೀಯ ಪಕ್ಷವೊಂದರ ಲಾಂಛನದಡಿಯಲ್ಲಿ ಬೆಳೆದ ಒಂದು ವ್ಯಕ್ತಿತ್ವ ಅಧಿಕಾರ ಮತ್ತು ಹಣದ ಪ್ರಭಾವದಲ್ಲಿ, ಅದರ ಅಮಲಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ದಾರುಣ ದುರಂತವನ್ನು ನಾವಿಂದು ಕಾಣುತ್ತಿದ್ದೇವೆ.ಎಡಿಯೂರಪ್ಪ ಇಂದು ನಿನ್ನೆಯ ವ್ಯಕ್ತಿಯಲ್ಲ. ಮೂರು ದಶಕದಿಂದ ರಾಜಕೀಯರಂಗದಲ್ಲಿಮನೆಮಾತಾದ ವ್ಯಕ್ತಿ. ಅವರ ಶಕ್ತಿ ಮತ್ತು ದೌರ್ಬಲ್ಯ ವೆರಡನ್ನೂ ಜನ ಸಮುದಾಯ ಅರಿತಿದೆ. ಅವರ ಒರಟುತನ,ಹಟಮಾರಿತನ, ಗಳ ನಡುವೆ ಹೋರಾಟದ ಪ್ರವೃತ್ತಿ ಮೆಚ್ಚುವಂಥಹದ್ದಾಗಿದೆ.
ಆದರೆ ಅವರಿಗೆ ಎಂದು ಅಧಿಕಾರ ಬಂತೊ  ಅಂದೇ ಯೆಡ್ಡಿಯ ಎರಡನೆಯ ಅವತಾರದ ಪ್ರಾದುರ್ಭಾವವಾಯಿತೆನ್ನಬಹುದು.  ಕುಮಾರಸ್ವಾಮಿ ಕೂಡ ಅಧಿಕಾರ ಮಾಯಾಜಾಲಕ್ಕೆ ಸಿಲುಕಿಯೇ ಅಲ್ಲವೇ ಯೆಡ್ಡಿಗೆ ಅಧಿಕಾರ ಬಿಡದೇ ಜನರಿಂದ ಛೀ ಥೂ ಎನ್ನಿಸಿಕೊಂಡಿದ್ದು ? ಚುನಾವಣೆಯಲ್ಲಿ ನೆಲಸಮಗೊಂಡಿದ್ದು. ಈಗ ಮತ್ತೆ ಅದೇ ಇತಿಹಾಸದ ಪುನರಾವರ್ತನೆಯಾಗಿದೆ. ಅಧಿಕಾರ ಮನುಷ್ಯನನ್ನು ಭೃಷ್ಟನನ್ನಾಗಿಸುತ್ತದೆ, ಅತಿ ಅಧಿಕಾರ ಅತಿ ಭೃಷ್ಟತೆಗೆ ನೂಕುತ್ತದೆ, ಎನ್ನುವ ಜನಪ್ರಿಯ ನಾಣ್ಣುಡಿಯೇ ಇದೆ.
ಕರ್ನಾಟಕದ ಬಿ ಜೆ ಪಿ ಗೆ ಜೀವ ಕೊಟ್ಟವನೇ ತಾನು, ತನ್ನಿಂದಮಾತ್ರ ಈ ಪಕ್ಷಕ್ಕೆ ಅಸ್ತಿತ್ವ, ತಾನೇ ಸರ್ವೋಚ್ಛ ನಾಯಕ ಎಂಬ iಹಾ ಅಹಂ, ಎಡೆಯೂರಪ್ಪನವರನ್ನು ಅದೆಷ್ಟು ಆಕ್ರಮಿಸಿತ್ತು ಎಂಬುದು  ಕಳೆದ ವಾರವಷ್ಟೇ ಇಡೀ ದೇಶ ಕಾಣುವವಂತಾಯಿತು.  ಬಿ ಜೆ ಪಿ ಯ ರಾಷ್ಟ್ರೀಯ ನಾಯಕರ ಅಂಕೆಗೂ ಸಿಗದೇ  ಪುಂಡು ಹೋರಿಯಂತೆ ಸೆಣಸಾಡಿದ ದೃಶ್ಯ ಹಾಸ್ಯಾಸ್ಪದವೆನ್ನಿಸಿತು.
ಲೋಕಾಯುಕ್ತವರದಿ  ಎಷ್ಟು ಸತ್ಯ ಅದೆಷ್ಟು ಅಸತ್ಯ ಎಂಬುದು ಮುಂದೆ ನ್ಯಾಯಾಲಯ ನಿರ್ಣಯಿಸುತ್ತಿತ್ತು,ಅವರ ಆರೋಪ ಮತ್ತು ಅದಕ್ಕೆ ಸಂಭಂಧ ಪಟ್ಟ ಘಟನೆಗಳು ಕಣ್ಣೆದುರೇ ಹರಡಿ ಬಿದ್ದಿರುವಾಗ ತಾನು ಸತ್ಯ ಹರಿಶ್ಚಂದ್ರನೆಂದು ಬಾಲಂಗೋಚಿಗಳ ಮೂಲಕ ಸಮರ್ಥನೆ ಮಾಡಿಸುತ್ತಿದ್ದ ದೃಶ್ಯ ನಗುಬರಿಸುತ್ತಿತ್ತು. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲು ಮೆರವಣಿಯ ಮೇಲೆ ಸಾಗಿದ್ದು ಒಂದು ಅಪರೂಪದ ದೃಶ್ಯ. ಅದೊಂದು ಗಾಂಧಿಯವರ ಧಾಂಡಿ ಉಪ್ಪಿನ ಸತ್ಯಾಗ್ರಹವನ್ನು ನೆನಪಿಸುವ ಘಟನೆಎಂದು  ಎಡ್ಡಿಯವರ ಮಗಳು ಉದ್ಗಾರವೆತ್ತಿದರೆ, ಅವರ ಬಾಲಂಗೋಚಿ ಶಾಸಕರು ಲೋಕಾಯುಕ್ತರನ್ನೆ ಹಿಗ್ಗಾ ಮುಗ್ಗಾ ಹೀಗಳೆಯುತ್ತಿರುವ ದೃಶ್ಯ ಹೇಸಿಗೆ ಹುಟ್ಟಿಸಿಬಿಟ್ಟಿತು.
ಅಧಿಕಾರ ಎಂಬ ಅಮಲು ಪ್ರಜಾಪ್ರಭುತ್ವ ದ ಆಶಯವನ್ನೇ ಮರೆಸುತ್ತದೆ ಎಂಬುದಕ್ಕೆ ಈ ಎಲ್ಲ ಘಟನೆಗಳು ಸಾಕ್ಷಿಯಾಗುತ್ತವೆ. ತಾನೊಬ್ಬ ನಾಯಕ ಎಂಬುದು ಮರೆತು  ಮಾಲಿಕರಾಗಿ ಬದಲಾಗಿಬಿಡುತ್ತಾರೆ. ಸಾವಿರ ಸಾವಿರಕೋಟಿಕಪ್ಪು ಹಣ ಮತ್ತಷ್ಟು ಕತ್ತಲೆಗೆ ದೂಡುತ್ತದೆ. ತಾತ್ವಿಕವಾಗಿ ಅಕ್ಷರಶಹ ಬತ್ತಲೆಯಾಗಿ ಬಿಡುತ್ತಾರೆ. ಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರು  ಪ್ರತೀ ಪಕ್ಷದಲ್ಲಿ ಇರುತ್ತಾರೆ. ನಿಜವಾಗಿ ಜನರೆದುರು ಸಾಧನೆಯ ಸಂದೇಶವನ್ನು ಹೊತ್ತೊಯ್ಯುವವರು ಅವರು.  ಎಡ್ಡಿಯವರ ಹಟಮಾರಿತನ  ಸ್ವಜನಪಕ್ಷಪಾತ ಗಳನ್ನು ಕಣ್ಣಾರೆ ಕಂಡ, ಖಾಲಿ ಕಿಸೆಯ ಕಾರ್ಯಕರ್ತನ ಸ್ಥಿತಿಯಂತೂ ದಯನೀಯ. ಸಾವಿರ ವರ್ಷ ಗುಲಾಮಗಿರಿ ಕಂಡ ಈ ದೇಶ  ಮಾನಸಿಕವಾಗಿ ಸಾಕಷ್ಟು ಘಾಸಿಗೊಂಡಿದೆ. ಇನ್ನೂ ಪ್ರಜಾಪ್ರಭುತ್ವ
ಈಮಣ್ಣಿನಲ್ಲಿ ಬೇರು ಬಿಟ್ಟಿಲ್ಲ, ಚಿಗುರೂ ಸಹ ಒಡೆದಿಲ್ಲ. ಮನೆ ಮನೆ ಬಾಗಿಲು ಬಡಿದು ಮತ ಬೇಡಿ ತಾನು ನಾಯಕನಾಗಿದ್ದೇನೆ, ಎಂಬ ನೆನಪು ಸಹ ಬಾರದಷ್ಟು  ಅಧಿಕಾರದ ಅಮಲು ನೆತ್ತಿಗೇರುತ್ತಿರುವಾಗ, ಪ್ರಜಾಪ್ರಭುತ್ವ ಸುಪ್ತಸ್ಥಿತಿಯಲ್ಲಿ ಕುಳಿತು  ತನ್ನ ಕಾಲಕ್ಕಾಗಿ ಕಾಯುತ್ತಲೇ ಇರುತ್ತದೆಯೇನೋ ??

No comments:

Post a Comment